CBSE BOARD X, asked by unesh33, 9 months ago

ಕುಂಬಾರನಿಗೆ ವರುಷ ದೊಣ್ಣೆಗೆ ನಿಮಿಷ ಗಾದೆ​

Answers

Answered by Crystal50120004
0

Answer:

sry I don't know ADD ME PLZ BRAINLIST

Answered by Anonymous
5

Answer:

ಕುಂಬಾರನಿಗೆ ವರುಷ; ದೊಣ್ಣೆಗೆ ನಿಮಿಷ

* ಗಾದೆಗಳು ವೇದಗಳಿಗೆ ಸಮ, ಗಾದೆಗಳು ಹಿರಿಯರ ಅನುಭವದ ಮಾತುಗಳಾಗಿವೆ.

* ಇದು ಒಂದು ಜನಪ್ರಿಯ ಗಾದೆ ಮಾತಾಗಿದ್ದು; ’ಯಾವುದೇ ಕೆಲಸದಲ್ಲಾದರೂ ಯಶಸ್ಸು ಗಳಿಸಬೇಕಾದರೆ ಕಷ್ಟಪಡಬೇಕು. ಆದರೆ ಹಾಳು ಮಾಡಲು ಕಷ್ಟ ಪಡಬೇಕಾಗಿಲ್ಲ’ ಎಂಬುದನ್ನು ತಿಳಿಸುತ್ತದೆ.

ಒಬ್ಬ ಕುಂಬಾರ ಮಡಕೆಗಳನ್ನು ಮಾಡಲು ಕೆರೆಯಿಂದ ಮಣ್ಣು ಹೊತ್ತು ತಂದು, ಅದರಲ್ಲಿರುವ ಕಲ್ಲು, ಕಸ-ಕಡ್ಡಿಗಳನ್ನು ತೆಗೆದು, ಮಣ್ಣನ್ನು ತುಳಿದು ಹದಮಾಡಿ; ತಿಗರಿಗೆ ಹಾಕಿ ತಿರುಗಿಸಿ, ಮಡಿಕೆಯ ಆಕಾರವನ್ನು ನೀಡಿ, ಅದನ್ನು ತಟ್ಟಿ ಸರಿಪಡಿಸಿ, ಬೇಯಿಸಿ ಹೀಗೆ ಬಹಳ ಕಷ್ಟಪಟ್ಟು ಮಡಿಕೆಯನ್ನು ಮಾಡುತ್ತಾನೆ. ಆದರೆ ಆ ಮಡಿಕೆಯನ್ನು ಒಡೆಯಲು ಒಂದು ದೊಣ್ಣೆ ಪೆಟ್ಟು ಸಾಕು.

ಯಾವುದೇ ಕಟ್ಟಡ ನಿರ್ಮಾಣ ಮಾಡಲು, ಒಂದು ಒಳ್ಳೆಯ ಸಂಸ್ಥೆಯನ್ನು ಸ್ಥಾಪಿಸಲು ಬಹಳ ಶ್ರಮಬೇಕು. ಆದರೆ ಹಾಳುಮಾಡುವುದಕ್ಕೆ ಕಷ್ಟಪಡಬೇಕಿಲ್ಲ. ಹಾಗೆಯೇ ನಾವು ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಲು, ಒಳ್ಳೆಯ ಹೆಸರು ಸಂಪಾದಿಸಲು ಬಹಳ ಶ್ರಮಿಸಬೇಕು. ಆದರೆ ಅದನ್ನು ಹಾಳುಮಾಡಿಕೊಳ್ಳಲು ಕ್ಷಣಕಾಲ ಸಾಕು. ಆದ್ದರಿಂದ, ನಾವು ಏನನ್ನಾದರೂ ಹಾಳುಮಾಡುವ ಮೊದಲು ಅದರ ಹಿಂದಿರುವ ಪರಿಶ್ರಮವನ್ನು ಅರ್ಥಮಾಡಿಕೊಳ್ಳಬೇಕು. ಎಂಬುದು ಈ ಗಾದೆಯ ಆಶಯವಾಗಿದೆ.

Be Brainly

Similar questions