ಕೋಟಿ ಚೆನ್ನಯರ ಆಯುಧದ ಹೆಸರೇನು
Answers
Answer:
which language is this
Explanation:
is this tamil or telugu
ಭಾಗ ೫ ಕ್ಕೆ ಇಲ್ಲಿ ಕ್ಲಿಕ್ಕಿಸಿ)
ಗೋತ್ರನಾಮವ ಬೆಸಗೊಂಡಡೆ
ಮಾತು ನೂಕದೆ ಸುಮ್ಮನಿದ್ದಿರಿದೇನಯ್ಯಾ?
ತಲೆಯ ಕುತ್ತಿ ನೆಲನ ಬರೆವುತ್ತಿದ್ದಿರಿದೇನಯ್ಯಾ?
ಗೋತ್ರನಾಮ ಮಾದಾರ ಚೆನ್ನಯ್ಯ, ಡೋಹರ ಕಕ್ಕಯ್ಯನೆಂಬುದೇನು
ಕೂಡಲಸಂಗಯ್ಯ.
-ಬಸವಣ್ಣ
ಬಸವಣ್ಣನವರು ಈ ವಚನದಲ್ಲಿ ದೇವರನ್ನೂ ಅಸ್ಪೃಶ್ಯರ ಸಾಲಿನಲ್ಲಿ ತಂದು ನಿಲ್ಲಿಸುತ್ತಾರೆ. ಮಾದಾರ ಚೆನ್ನಯ್ಯ ಮತ್ತು ಡೋಹರ ಕಕ್ಕಯ್ಯನವರನ್ನು ದೇವರ ಗೋತ್ರಪುರುಷರನ್ನಾಗಿ ಮಾಡುತ್ತಾರೆ!
ಶಿವಪುರಾಣದ ಪ್ರಸಂಗವೊಂದು ಈ ವಚನಕ್ಕೆ ಹಿನ್ನೆಲೆಯಾಗಿದೆ.’ಗಿರಿಜಾಕಲ್ಯಾಣ’ದ ಸಂದರ್ಭದಲ್ಲಿ ವರನಾದ ಶಿವನಿಗೆ ಮದುವೆ ಮಾಡಿಸುವ ಪುರೋಹಿತ ಗೋತ್ರನಾಮ ಕೇಳುತ್ತಾನೆ. ಗೋತ್ರವಿಲ್ಲದ ಅ ವೈದಿಕ ಶಿವ ಕಕ್ಕಾಬಿಕ್ಕಿಯಾಗುತ್ತಾನೆ. ಆತನ ಬಾಯಿಯಿಂದ ಮಾತುಗಳು ಹೊರಡುವುದಿಲ್ಲ. ಏನೂ ತೋಚದವನಾಗಿ ತಲೆ ಕೆಳಗೆ ಮಾಡಿ ಹೆಬ್ಬೆರಳಿನಿಂದ ನೆಲ ಗೀಚತೊಡಗುತ್ತಾನೆ! ಈ ಪುರಾಣ ಪ್ರಸಂಗದಿಂದ ಬಸವಣ್ಣನವರು ಸಿಡಿಮಿಡಿಗೊಂಡಿದ್ದಾರೆ. ನಿಮ್ಮದು ಮಾದಾರ ಚೆನ್ನಯ್ಯನ ಗೋತ್ರ -ಡೋಹರಕಕ್ಕಯ್ಯನ ಗೋತ್ರ ಎಂಬುದು ಗೊತ್ತಿಲ್ಲವೆ ಎಂದು ಈ ವಚನದಲ್ಲಿ ದೇವರನ್ನು ‘ಗದರಿಸಿದ್ದಾರೆ’. ಜಾತೀಯತೆಯ ಬಗ್ಗೆ ಬಸವಣ್ಣನವರಿಗೆ ಇದ್ದ ತೀವ್ರ ತಿರಸ್ಕಾರಕ್ಕೆ ಈ ವಚನ ಸಾಕ್ಷಿಯಾಗಿದೆ.