India Languages, asked by rakshitakengar, 9 months ago

ಸಾರಿಗೆ ರಾಷ್ಟ್ರೀಕರಣ ಪ್ರಬಂಧ​

Answers

Answered by Anonymous
4

Answer:

I can't understand the question...

Answered by social53
1

Answer:

ತೊಂಬತ್ತರ ನಂತರ ಕರ್ನಾಟಕದ ಅರ್ಥ, ಸಮಾಜ, ಸಂಸ್ಕೃತಿ, ರಾಜಕೀಯಗಳಲ್ಲಿ ಆಗುತ್ತಿರುವ ಬದಲಾವಣೆಗಳ ಒಂದು ಕಿರು ಚಿತ್ರಣ ನೀಡುವ ಉದ್ದೇಶ ಈ ಪುಸ್ತಕದ್ದು. ತೊಂಬತ್ತರವರೆಗೆ ನಮ್ಮ ಅಭಿವೃದ್ಧಿ ನೀತಿಗಳು ಸೋಶಿಯಲಿಸ್ಟ್ ಗುಣಗಳನ್ನು ಅರೆಬರೆಯಾಗಿ ಬಿಂಬಿಸುತ್ತಿದ್ದವು. ಭೂಸುಧಾರಣೆ, ಬ್ಯಾಂಕ್ ರಾಷ್ಟ್ರೀಕರಣ, ಸಾರಿಗೆ ರಾಷ್ಟ್ರೀಕರಣ, ಉಚಿತ ಶಿಕ್ಷಣ, ಆರೋಗ್ಯ ಹೀಗೆ ಹಲವು ಸೋಶಿಯಲಿಸ್ಟ್ ಅಭಿವೃದ್ಧಿ ನೀತಿಗಳನ್ನು ಸರಕಾರ ಜಾರಿಗೆ ತಂದಿದೆ. ಆದರೆ ತೊಂಬತ್ತರ ನಂತರ ಸೋಶಿಯಲಿಸ್ಟ್ ಅಭಿವೃದ್ಧಿಗೆ ವಿರುದ್ಧ ನೀತಿಗಳನ್ನು ಸರಕಾರ ಜಾರಿಗೆ ತರುತ್ತಿದೆ. ಉಳುವವನೇ ಹೊಲದೊಡೆಯ ಎನ್ನುವ ಭೂಸುಧಾರಣ ಮಸೂದೆಗೆ ತಿದ್ದುಪಡಿ ತಂದು ಉಳ್ಳವರಲ್ಲಿ ಭೂಮಿ ಶೇಖರಣೆಗೆ ಅವಕಾಶ ಮಾಡಿಕೊಡಲಾಗಿದೆ.

ಸಾರ್ವಜನಿಕ ವಲಯದ ಉದ್ದಿಮೆಗಳಲ್ಲಿ ಹಲವನ್ನು ಮುಚ್ಚಲಾಗಿದೆ. ಮತ್ತೆ ಹಲವನ್ನು ಖಾಸಗಿಯವರಿಗೆ ಮಾರಲಾಗಿದೆ. ಬ್ಯಾಂಕ್‌ಗಳನ್ನು ಖಾಸಗೀಕರಣಗೊಳಿಸಿಲ್ಲ. ಆದರೆ ಬ್ಯಾಂಕ್ ವ್ಯವಹಾರಗಳು ಕೂಡ ಮಾರುಕಟ್ಟೆ ನಿಯಮಾನುಸಾರ ನಡೆಯಬೇಕೆಂದು ತಾಕೀತು ಮಾಡಲಾಗಿದೆ. ಇತ್ತೀಚಿನ ದಿನಗಳಲ್ಲಿ ಖಾಸಗಿಯವರಿಗೂ ಬ್ಯಾಂಕ್ ತೆರೆಯಲು ಅವಕಾಶಗಳನ್ನು ಕಲ್ಪಿಸಲಾಗಿದೆ.

Similar questions