History, asked by pradeeppradeep9384, 6 months ago

ಕೆ ಎಸ್ ನಸಿಂಹಸ್ವಾಮಿ ಪರಿಚಯ​

Answers

Answered by 11monish11
0

Answer:

Explanation:

ಕೆ.ಎಸ್.ನರಸಿಂಹಸ್ವಾಮಿ, ಕನ್ನಡಿಗರ ಪ್ರೇಮಕವಿ,ಕನ್ನಡಿಗರ ಅತ್ಯಂತ ಪ್ರೀತಿಯ ಕವನಸಂಕಲನಗಳಲ್ಲೊಂದಾದ, ಮೈಸೂರು ಮಲ್ಲಿಗೆ ಯ ಕರ್ತೃ.[೧](ಜನವರಿ ೨೬ ೧೯೧೫-ಡಿಸೆಂಬರ್ ೨೮ ೨೦೦೩) 'ಮೈಸೂರು ಮಲ್ಲಿಗೆ', ಕೆ.ಎಸ್.ನರಸಿಂಹಸ್ವಾಮಿಯವರ ಮೊದಲ ಕವನ ಸಂಕಲನವಾಗಿದೆ. ಇದು ಮನೆ ಮನೆಯ ಮಾತಾಗಿ, ಕಾವ್ಯವಾಗಿ, ಹಾಡಾಗಿ ಹರಿದಿದೆ. ಇದುವರೆವಿಗೂ ಇಪ್ಪತ್ತೈದಕ್ಕೂ ಹೆಚ್ಚು ಬಾರಿ ಮುದ್ರಣ ಭಾಗ್ಯ ಪಡೆದಿದೆ. ಕನ್ನಡದ ಕೆಲವೇ ಕೃತಿಗಳಿಗೆ ಇಂಥ ಮರು ಮುದ್ರಣದ ಭಾಗ್ಯ- ಆಧುನಿಕ ಕನ್ನಡ ಕಾವ್ಯ ಹಲವು ರೂಪಗಳನ್ನು ಪಡೆಯುತ್ತಾ ಬಂದಿದೆ. ಹಲವು ಸಾಹಿತ್ಯ ಚಳುವಳಿಗಳು ಬಂದುಹೋಗಿವೆ. ಕೆಎಸ್‌ನ ಎಲ್ಲ ಕಾಲಕ್ಕೂ ಸಲ್ಲುವ ಜನಪ್ರೀತಿಯ ಕಾವ್ಯ ಕೃಷಿಗೆ ದೊಡ್ಡ ಹೆಸರು. ಕವಿ ವಿಮರ್ಶಕ ಡಾ. ಎಚ್. ಎಸ್. ವೆಂಕಟೇಶಮೂರ್ತಿ ಅವರು ಕೆಎಸ್‌ನ ಬಗ್ಗೆ ಬರೆಯುತ್ತ ``ನವೋದಯದ ಕಾವ್ಯ ಸಂದರ್ಭದಲ್ಲಿ ಹೆಸರು ಮಾಡಿದ್ದ ಈ ಕವಿ ತಮ್ಮ ಸುಕುಮಾರ ಜಗತ್ತಿನಿಂದ, ನಿಷ್ಠುರವಾದ ಬದುಕಿನ ಸಂದರ್ಭಕ್ಕೆ ಹೊರಳಿದ್ದು `ಶಿಲಾಲತೆ'ಯಲ್ಲಿ. ಆದ್ದರಿಂದ ಸಂಗ್ರಹಕ್ಕೆ ಒಂದು ಐತಿಹಾಸಿಕ ಮಹತ್ವವಿದೆ" -ಎಂದು ದಾಖಲಿಸಿದ್ದಾರೆ. ಜೊತೆಗೆ ಮೈಸೂರು ಮಲ್ಲಿಗೆಯ ಕವಿತೆಯ ಭಾಷೆ, ವಸ್ತು, ಲಯಗಳ ಮೇಲೆ ಇಂಗ್ಲಿಷ್ ಗೀತೆಗಳ ಪ್ರಭಾವವನ್ನು ಗುರುತಿಸಬಹುದು ಎಂದು ಡಾ. ಹೆಚ್.ಎಸ್.ವಿ. ಗುರ್ತಿಸಿದ್ದಾರೆ.

ಸಾಹಿತ್ಯ ಜೀವನ ಮತ್ತು ಪ್ರಶಸ್ತಿಗಳು

೧೯೩೩ - ಕಬ್ಬಿಗನ ಕೂಗು ಮೊದಲ ಕವನ.

೧೯೪೨- ಮೈಸೂರು ಮಲ್ಲಿಗೆ ಪ್ರಸಿದ್ಧ ಕವನ ಸಂಕಲನ ಪ್ರಕಟ.

೧೯೪೩- ದೇವರಾಜ್ ಬಹದ್ದೂರ್ ಬಹುಮಾನ.

೧೯೫೭ರಲ್ಲಿ `ಶಿಲಾಲತೆ'ಗೆ ರಾಜ್ಯ ಸಂಸ್ಕೃತಿ ಇಲಾಖೆ ಪ್ರಶಸ್ತಿ,

೧೯೭೨- ಚಂದನ ಅಭಿನಂದನ ಗ್ರಂಥ ಸಮರ್ಪಣೆ

೧೯೭೭- ತೆರೆದ ಬಾಗಿಲು ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ .

೧೯೮೬- ಮೈಸೂರು ಮಲ್ಲಿಗೆ ಧ್ವನಿ ಸುರುಳಿ.

೧೯೮೭- ಕೇರಳದ ಕವಿ ಕುಮಾರ್ ಆಶಾನ್ ಪ್ರಶಸ್ತಿ .

೧೯೯೦- ಮೈಸೂರಿನಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯಾ ಸಮ್ಮೇಳನದ ಅಧ್ಯಕ್ಷತೆ.

೧೯೯೧- ಮೈಸೂರು ಮಲ್ಲಿಗೆ ಚಲನಚಿತ್ರ ಬಿಡುಗಡೆ.

೧೯೯೨- ಉತ್ತಮ ಗೀತರಚನೆಗೆ ರಾಷ್ಟ್ರಪತಿ ಪ್ರಶಸ್ತಿ .

೧೯೯೨- ಬೆಂಗಳೂರು ವಿಶ್ವವಿದ್ಯಾಲಯದಿಂದ ಗೌರವ ಡಿಲಿಟ್.

೧೯೯೬- ಮಾಸ್ತಿ ಪ್ರಶಸ್ತಿ .

೧೯೯೭- ಪಂಪ ಪ್ರಶಸ್ತಿ .

೧೯೯೯- ಕೇಂದ್ರ ಸಾಹಿತ್ಯ ಅಕಾಡೆಮಿ ಗೌರವ ಫೆಲೋಷಿಪ್.

೨೦೦೦- ಗೊರೂರು ಪ್ರಶಸ್ತಿ .

ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.

ಪ್ರಮುಖ ಕೃತಿಗಳು

ಕವನ ಸಂಕಲನಗಳು

೧೯೪೨- ಮೈಸೂರು ಮಲ್ಲಿಗೆ.

೧೯೪೫- ಐರಾವತ

೧೯೪೭- ದೀಪದ ಮಲ್ಲಿ

೧೯೪೯- ಉಂಗುರ

೧೯೫೪- ಇರುವಂತಿಗೆ

೧೯೫೮- ಶಿಲಾಲತೆ

೧೯೬೦- ಮನೆಯಿಂದ ಮನೆಗೆ

೧೯೭೯- ತೆರೆದ ಬಾಗಿಲು

೧೯೮೯- ನವ ಪಲ್ಲವ

೧೯೯೩- ದುಂಡುಮಲ್ಲಿಗೆ

೧೯೯೯- ನವಿಲದನಿ

೨೦೦೦- ಸಂಜೆ ಹಾಡು

೨೦೦೧- ಕೈಮರದ ನೆಳಲಲ್ಲಿ

೨೦೦೨- ಎದೆ ತುಂಬ ನಕ್ಷತ್ರ

೨೦೦೩- ಮೌನದಲಿ ಮಾತ ಹುಡುಕುತ್ತ

೨೦೦೩- ದೀಪ ಸಾಲಿನ ನಡುವೆ

೨೦೦೩- ಮಲ್ಲಿಗೆಯ ಮಾಲೆ

೨೦೦೩- ಹಾಡು-ಹಸೆ

ಗದ್ಯ

ಮಾರಿಯ ಕಲ್ಲು

ದಮಯಂತಿ

ಉಪವನ

ಅನುವಾದ

ಮೋಹನಮಾಲೆ

ನನ್ನ ಕನಸಿನ ಭಾರತ

ಮೀಡಿಯಾ. (ನಾಟಕ)

ಪುಷ್ಕಿನ್ ಕವಿತೆಗಳು

ರಾಬರ್ಟ್ ಬರ್ನ್ಸ್ ಪ್ರೇಮಗೀತೆಗಳು

ಆಯ್ದ ಕವನಗಳು

ಚೆಲುವು

ಮಾತು ಮುತ್ತು

ನಿಲ್ಲಿಸದಿರೆನ್ನ ಪಯಣವನು

ಅಂಥಿಂಥ ಹೆಣ್ಣು ನೀನಲ್ಲ!!

ದೀಪದ ಮಲ್ಲಿ

ಅಕ್ಕಿ ಆರಿಸುವಾಗ ...

ನಿನ್ನೊಲುಮೆಯಿಂದಲೆ

ಬಾರೆ ನನ್ನ ಶಾರದೆ

ನಿನ್ನ ಹೆಸರು

ರಾಯರು ಬಂದರು

ಬಳೇಗಾರ ಚೆನ್ನಯ್ಯ ಬಾಗಿಲಿಗೆ ಬಂದಿಹನು

ನಮ್ಮುರು ಚೆಂದವೋ ನಿಮ್ಮೂರು ಚೆಂದವೋ

ಸಿರಿಗಿರಿಯ ನೀರಿನಲಿ ಬಿರಿದ ತಾವರೆಯಲ್ಲಿ

ನಿನ್ನ ಪ್ರೇಮದ ಪರಿಯೆ

ಹಕ್ಕಿಯ ಹಾಡಿಗೆ ತಲೆದೂಗುವ ಹೂ

Similar questions