India Languages, asked by mvalli2297, 2 months ago

ಶ್ರೀಮುಖ ನನ್ನು ರಾಜನು ಮುಚ್ಚಿಕೊಳ್ಳಲು ಕಾರಣವೇನು​


samiyatavde: give your uid

Answers

Answered by yuvikamd18
0

Answer:

ಹರನ ಕುಮಾರನ ಚರಣಕಮಲಗಳಿಗೆರಗಿ

ಶಾರದೆಗೆ ವಂದಿಸುತ

ಶರಧಿಶಯನಗೆ ಸೆರಗೊಡ್ಡಿ ಬೇಡಿಕೊಂಬೆ

ಶರಧಿಸುತೆಯ ಕಥೆಗೆ ವರವ

ಸಾಕ್ಷಾತ ಶ್ರೀಹರಿ ವಕ್ಷಸ್ಥಳ ವಾಸಿಯೇ

ಇಕ್ಷುಚಾಪದವನ ಪಡೆದ

ಮೋಕ್ಷದಾಯಕಳೇ ಮಾ ಲಕ್ಷುಮಿ ಕರುಣಾ-

ಕಟಾಕ್ಷದಿ ನೋಡಬೇಕೆನ್ನ

ಶ್ರಾವಣಮಾಸದಿ ಮೊದಲ ಶುಕ್ಕುರವಾರ

ಮಾಧವನರಸಿ ಮಾಲಕ್ಷ್ಮೀ ದೇವೇರ

ಮಹಿಮೆ ಕೊಂಡಾಡುವೋದೀ ಕಥೆ

ಕಿವಿಗೊಟ್ಟು ಕೇಳೋದು ಜನರು

ಬಡವ ಬ್ರಾಹ್ಮಣನೊಂದು ಪಟ್ಟಣದೊಳಗಿದ್ದ

ಮಡದಿ ಮಕ್ಕಳ ಸಹಿತಾಗಿ

ಹಿಡಿದು ತಂಬೂರಿ ತಂಬಿಗೆಯ ಗೋಪಾಳಕ್ಕೆ

ಬಿಡದೊಂದು ಮನೆಯ ತಿರುಗುತಲಿ

ಸೊಸೆಯರು ನಾಲ್ಕು ಮಂದಿಯು ಗಂಡುಮಕ್ಕಳೂ

ಹಸುಗೂಸುಗಳು ಮನೆತುಂಬಾ

ಅಶನ ವಸನವಿಲ್ಲ ಹಸಿದ ಮಕ್ಕಳಿಗೆ ಹಾಲು

ಮೊಸರು ಅನ್ನವು ಮೊದಲಿಲ್ಲ

ಅತಿಗುಣವಂತರು ಗತಿಯಿಲ್ಲ ಗ್ರಾಸಕ್ಕೆ

ಮಿತಭೋಜನವ ಮಾಡುವರು

ವ್ರತನೇಮ ನಿಷ್ಠೆ ನಿರುತ ದರಿದ್ರವನು

ಶ್ರೀಪತಿ ಸತಿ ದಯದಿ ನೋಡಿದಳು

ಒಂದು ದಿನದಿ ಬಂದ ಮಂದಿ ಮಂದಿರದಲ್ಲಿ

ಚೆಂದಾದ ಸುಣ್ಣ ಸಾರಣೆಯು

ರಂಗವಲ್ಲಿ ಚಿತ್ರ ಬಣ್ಣಕಾರಣೆ ಮನೆ ಮುಂದೆ ತೋರಣ ಕಟ್ಟುತಿರಲು

ಮನೆಮನೆಯಲ್ಲಿ ಮಾಲಕ್ಷ್ಮೀದೇವೇರ ಚಟ್ಟಿಗೆ ಬರೆವುದನು

ತಾ ಕಂಡು ಇದು ಏನು ನೋವಿ

ಎನಗೆ ಹೇಳಬೇಕೆಂದು ಘನಭಕ್ತಿಯಿಂದ ಕೇಳಿದನು

ಕ್ಷೀರಸಾಗರದಲ್ಲಿ ಹುಟ್ಟಿದ ಮಾಲಕ್ಷ್ಮೀ ದೇವಿ

ದೇವರ ಪಟ್ಟದರಸಿ

ಶ್ರಾವಣಮಾಸ ಸಂಪತ್ತು ಶುಕ್ಕುರವಾರ

ನಾವು ಪೂಜೆಯ ಮಾಡಬೇಕು

ಎನಗೊಂದು ಚಟ್ಟೆಗೆ ಬರೆದುಕೊಟ್ಟರೆ ಎನ್ನ

ಮನೆಯಲ್ಲಿ ಇಟ್ಟು ಪೂಜಿಪೆನು

ವಿನಯದಿಂದ ಹೇಳಿಕೊಂಡರೆ ಒಂದು ಚಟ್ಟಿಗೆ

ಬರೆದುಕೊಟ್ಟರು ಬಲಗೈಲಿ

ಸಿರಿದೇವಿ ಚಟ್ಟಿಗೆ ಹಿಡಿದು ಗೋಪಾಳಕ್ಕೆ

ಹೋದನು ಮನೆ ಮನೆಯಲ್ಲಿ

ಗೋಧಿ ಅಕ್ಕಿ ಬ್ಯಾಳಿ ಬೆಲ್ಲ ತುಪ್ಪವ ತಂದು

ನೀಡೋರು ಹಿಡಿ ಹಿಡಿರೆಂದು

ಕ್ಯಾದಿಗೆ ಕುಸುಮ ಮಲ್ಲಿಗೆ ಪತ್ರಫಲಗಳು

ಪೂಜಾ ಸಾಧನ ಪದಾರ್ಥಗಳು

ಆದಿಲಕ್ಷ್ಮಿ ದಯ ಆದ ಕಾರಣದಿಂದ

ಆದರದಿಂದ ಕೊಡುವರು

Similar questions