India Languages, asked by nayakodigunshil, 1 month ago

'ಹರನೆಂಬುದೆ ಸತ್ಯ, ಸತ್ಯವೆಂಬುದೆ ಹರನು' ಈ ಹೇಳಿಕೆಯನ್ನು ಹೇಳಿದ ಕ​

Answers

Answered by vivekpujar359
1

Answer:

ರಾಘವಾಂಕ ಕವಿ ತನ್ನ ಹರಿಶ್ಚಂದ್ರ ಕಾವ್ಯದಲ್ಲಿ'ಸತ್ಯವೆಂಬುದೆ ಹರನು ಹರನೆಂಬುದೆ ಸತ್ಯ' ಎಂದು ಸಾರಿದ್ದಾನೆ. ಅದೇ ಮಾತನ್ನು ಚಿದಾನಂದಮೂರ್ತಿ ಅವರಿಗೂ ಅನ್ವಯಿಸಬಹುದು. ಸತ್ಯ ಶೋಧನೆಯನ್ನೇ ತಮ್ಮ ಜೀವನದ ಧ್ಯೇಯವನ್ನಾಗಿಸಿಕೊಂಡವರು ಚಿಮೂ. ಹಾಗಾಗಿ 'ಸತ್ಯವೆಂಬುದೆ ಚಿಮೂ, ಚಿಮೂವೆಂಬುದೆ ಸತ್ಯ' ಎಂದರೆ ಅದು ಉತ್ಪ್ರೇಕ್ಷೆ ಎನಿಸಲಾರದು. ಸತ್ಯಕ್ಕಾಗಿ ಬದುಕಿ, ಸತ್ಯವನ್ನು ಹುಡುಕಿಕೊಂಡು ಹೋಗಿ ಸತ್ಯವೇ ಆದವರು ಚಿಮೂ.

ಇವರು ಎಂ.ಎ. ವಿದ್ಯಾರ್ಥಿ ಆಗಿದ್ದಾಗಲೇ ಡಾ. ಡಿ.ಎಲ್‌ ನರಸಿಂಹಾಚಾರ್‌ ಅವರ ಪ್ರಭಾವಕ್ಕೆ ಒಳಗಾಗಿದ್ದರು. ಕುವೆಂಪು ತೀ ನಂ.ಶ್ರೀ ಅವರ ಅಚ್ಚುಮೆಚ್ಚಿನ ವಿದ್ಯಾರ್ಥಿಯಾಗಿದ್ದರು. ತಮ್ಮ ವಿದ್ಯಾರ್ಥಿ ಜೀವನದಲ್ಲಿಯೇ 'ಪಂಪಕವಿ ಮತ್ತು ಮೌಲ್ಯ ಪ್ರಸಾರ' ಎಂಬ ಮೌಲಿಕವಾದ ಲೇಖನವನ್ನು ಬರೆದಿದ್ದರು. ಅದು ಮುಂದೆ ಹಲವು ವಿಶ್ವವಿದ್ಯಾನಿಲಯಗಳ ಕನ್ನಡ ಪಠ್ಯಗಳಲ್ಲಿಯೂ ಒಂದು ಪಠ್ಯವಾಗಿ ಸೇರಿತ್ತು ಎಂಬುದು ಚಿಮೂ ಅವರ ವಿದ್ಯಾರ್ಥಿದಿನಗಳ ಚೈತನ್ಯ ಶಕ್ತಿಗೆ ಸಂಕೇತವಾಗಿದೆ. ವೀರ ಮತ್ತು ತ್ಯಾಗ ಎಂಬ ಎರಡು ಮೌಲ್ಯಗಳನ್ನು ತಮ್ಮ ಎರಡು ಕಣ್ಣುಗಳಂತೆ ದುಡಿಸಿಕೊಂಡವರು ಚಿದಾನಂದಮೂರ್ತಿಯವರು. ಬದುಕಿನುದ್ದಕ್ಕೂ ಶರಣರ ಭಕ್ತಿ ಮತ್ತು ಪ್ರಾಮಾಣಿಕ ಚಾರಿತ್ರ್ಯ ಶುದ್ಧಿಗಳನ್ನು ಮೈಗೂಡಿಸಿಕೊಂಡು ಬಂದವರು. ಮಧ್ಯಕಾಲೀನ ಕನ್ನಡ ಸಾಹಿತ್ಯದಲ್ಲಿದೀನದಲಿತರ ಬದುಕಿನ ಸ್ಥಿತಿಗತಿಗಳನ್ನು ಅಧ್ಯಯನ ಮಾಡಿ ಸಾಹಿತ್ಯದಲ್ಲಿಸಾಮಾಜಿಕ ಪ್ರಜ್ಞೆಯನ್ನು ಎಚ್ಚರಗೊಳಿಸಿದ್ದಾರೆ.

ಕನ್ನಡ ಪರಂಪರೆಯ ಪ್ರತಿನಿಧಿ

ಚಿದಾನಂದಮೂರ್ತಿಯವರು ತೀನಂಶ್ರೀ ಅವರ ಮಾರ್ಗದರ್ಶನದಲ್ಲಿ'ಕನ್ನಡ ಶಾಸನಗಳ ಸಾಂಸ್ಕೃತಿಕ ಅಧ್ಯಯನ'' ಎಂಬ ಮಹಾಪ್ರಬಂಧಕ್ಕೆ 1984ರಲ್ಲಿಪಿಎಚ್‌ಡಿ ಪದವಿ ಪಡೆದವರು. ಅಂದಿನಿಂದ ಇಂದಿನವರೆಗೂ ಕನ್ನಡದ ಸಂಸ್ಕೃತಿಯ ಅಧ್ಯಯನ, ಶಾಸನಗಳ ಅಧ್ಯಯನ, ಇತಿಹಾಸದ ಅಧ್ಯಯನಕ್ಕೆ ಒಂದು ಮಾದರಿ ಕೃತಿಯಾಗಿ ಶೋಧಮಾರ್ಗವನ್ನೇ ಸೃಷ್ಟಿಸಿದೆ. ಇತಿಹಾಸ ಎಂದರೆ ಕೇವಲ ರಾಜರುಗಳ ಕಥೆಯಲ್ಲ. ಇತಿಹಾಸ ಎಂದರೆ ಜನ ಸಾಮಾನ್ಯರ ಜೀವನ ಚಿತ್ರಣವೆಂಬ ಎಚ್ಚರವನ್ನು ಮೂಡಿಸಿದವರು ಚಿದಾನಂದಮೂರ್ತಿಯವರು. ಅವರಿಗೆ ಪಂಪಪೂರ್ವ ಯುಗದಿಂದ ಆಧುನಿಕ ಯುಗದವರೆಗಿನ ಸಾಹಿತ್ಯ, ಭಾಷೆ, ಛಂದಸ್ಸು, ವ್ಯಾಕರಣ, ಲೋಕಜ್ಞಾನ, ಇತಿಹಾಸಜ್ಞಾನ, ಶಾಸ್ತ್ರಜ್ಞಾನಗಳ ಆಳವಾದ ಪಾಂಡಿತ್ಯವಿತ್ತು. ಅದು ಅಖಂಡ ಭಾರತದ ಸಂಸ್ಕೃತಿಯೊಡನೆ ಅನುಸಂಧಾನ ಮಾಡಲು ಬೇಕಾದ ಶಕ್ತಿ-ಪ್ರೀತಿ- ಕ್ರಿಯಾಶೀಲತೆಯನ್ನು ಒದಗಿಸಿತ್ತು. ವಚನ ಸಾಹಿತ್ಯದ ಶೂನ್ಯ ಸಂಪಾದನೆಯನ್ನು ನೆತ್ತಿಯ ಮೇಲೆ ಹೊತ್ತು ಬದುಕಿದವರು ಚಿಮೂ.

ಭಾಷಾ ವಿಜ್ಞಾನದ ಮೂಲತತ್ವಗಳು, ವಾಗರ್ಥ, ಸಂಶೋಧನ ತರಂಗ, ಲಿಂಗಾಯತ ಅಧ್ಯಯನಗಳು, ಹೊಸತು ಹೊಸತು, ಶೂನ್ಯ ಸಂಪಾದನೆಯನ್ನು ಕುರಿತು, ವಚನ ಸಾಹಿತ್ಯ, ವಚನ ಶೋಧ 1 ಮತ್ತು 2, ಗ್ರಾಮೀಣ, ಪಗರಣ ಮತ್ತು ಇತರ ಸಂಪ್ರದಾಯಗಳು, ಮಧ್ಯಕಾಲೀನ ಕನ್ನಡ ಸಾಹಿತ್ಯ ಮತ್ತು ಅಸ್ಪೃಶ್ಯತೆ, ಕವಿರಾಜಮಾರ್ಗಕ್ಕೆ ಹಿಂದಿನ ಕನ್ನಡ ಸಾಹಿತ್ಯ, ಕರ್ನಾಟಕ ನೇಪಾಳ, ಕನ್ನಡಾಯಣ, ಬಸವಣ್ಣ ಮೊದಲಾದ ಕೃತಿಗಳನ್ನು ರಚಿಸುವ ಮೂಲಕ ಕನ್ನಡದ ಪ್ರಜ್ಞೆಯನ್ನು ಶ್ರೀಮಂತಗೊಳಿಸಿದ್ದಾರೆ. ಭಾರತೀಯ ಸಂಸ್ಕೃತಿಯನ್ನು ಚಿರಂಜೀವಿಯನ್ನಾಗಿಸಿದ್ದಾರೆ.

ಯಾರಿಗೂ ಅಂಜುವವರಲ್ಲಚಿಮೂ

Similar questions