Science, asked by pmarun70, 2 months ago

ಚೌರಿ ಚೌರ ಘಟನೆಯನ್ನ ವಿವರಿಸಿ.​

Answers

Answered by Anonymous
17

Answer:

ಚೌರಿ ಚೌರಾ ಘಟನೆಯು ಇಂದಿನ ಉತ್ತರ ಪ್ರದೇಶ ರಾಜ್ಯದ ಗೊರಖ್ ಪುರ ಜಿಲ್ಲೆಯಲ್ಲಿ ೫ ಫ಼ೆಬ್ರವರಿ ೧೯೨೨ ರಲ್ಲಿ ನೆಡೆಯಿತು. ಪ್ರತಿಭಟನಾಕಾರರ ಡೊಡ್ಡ ಗುಂಪೊಂದು ಅಸಹಕಾರ ಚಳುವಳಿಯಲ್ಲಿ ಭಾಗಹಿಸುತ್ತಿರುವಾಗ ಬ್ರಿಟೀಶ್ ಪೋಲೀಸರೊಂದಿಗೆ ಘರ್ಷಣೆ ಸಂಭವಿಸಿ ಪೋಲೀಸರು ಗುಂಡನ್ನು ಹಾರಿಸಿದರು. ಇದಕ್ಕೆ ಪ್ರತಿಯಾಗಿ ಪ್ರತಿಭಟನಾಕಾರರು ಪೋಲೀಸ್ ಠಾಣೆಗೆ ದಾಳಿಮಾಡಿ ಬೆಂಕಿ ಹಚ್ಚಿದರು. ಇದರಿಂದ ೨೨ ಮಂದಿಯ ಸಾವು ಸಂಭವಿಸಿತು. ಅಸಹಾಕಾರ ಚಳುವಳಿಗೆ ಕರೆಕೊಟ್ಟು ಅದರ ನೇತೃತ್ವವಹಿಸಿದ್ದ ಮಹಾತ್ಮ ಗಾಂಧಿಜಿಯವರು, ಈ ಘಟನೆ ತಮ್ಮ ಅಹಿಂಸೆಯ ಮಾರ್ಗಕ್ಕೆ ವಿರುದ್ಧವಾಗಿದ್ದುದರಿಂದ ಅವರು ಅಸಹಕಾರ ಚಳುವಳಿಯನ್ನು ೧೨ ಫ಼ೆಬ್ರವರಿ ೧೯೨೨ ರಂದು ಕೊನೆಗೊಳಿಸಿದರು..ಜವಾಹರ‌ಲಾಲ್ ನೆಹರು ತಮ್ಮ ಆತ್ಮಚರಿತ್ರೆಯಲ್ಲಿ ಗಂಧೀಜೀಯವರ ಈ ನಿರ್ಧಾರದಿಂದ ಜೈಲಿನಲ್ಲಿದ್ದ ಕಾಂಗ್ರೇಸ್ ಕಾರ್ಯಕರ್ತರಿಗೆ ಬಹಳ ಹಿನ್ನೆಡೆ ಮತ್ತು ನಿರಾಶಾದಾಯಕವಾಗಿತ್ತು ಎಂದು ಬರೆದಿದ್ದಾರೆ. ಅಸಹಕಾರ ಚಳುವಳಿಯನ್ನು ಹಿಂಪಡೆದ್ದಕ್ಕೆ ವಿಚಲಿತರಾದ ಭಗತ್ ಸಿಂಗ್ ಕ್ರಾಂತಿಕಾರಿ ಪ್ರತಿಭಟನೆಯ ಮಾರ್ಗ ಹಿಡಿಯುತ್ತಾರೆ.

Answered by ItzTwinklingStar
96

Answer:

1922 ರ ಫೆಬ್ರವರಿ 4 ರಂದು ಯುನೈಟೆಡ್ ಸ್ಟೇಟ್ಸ್‌ನ ಗೋರಖ್‌ಪುರ ಜಿಲ್ಲೆಯ (ಆಧುನಿಕ ಉತ್ತರ ಪ್ರದೇಶ) ಚೌರಿ ಚೌರಾದಲ್ಲಿ ಚೌರಿ ಚೌರಾ ಘಟನೆ ಸಂಭವಿಸಿದೆ, ಅಸಹಕಾರ ಚಳವಳಿಯಲ್ಲಿ ಭಾಗವಹಿಸಿದ ಪ್ರತಿಭಟನಾಕಾರರ ದೊಡ್ಡ ಗುಂಪು ಪೊಲೀಸರೊಂದಿಗೆ ಘರ್ಷಣೆ ನಡೆಸಿತು. ಗುಂಡು ಹಾರಿಸಿದರು. ಇದಕ್ಕೆ ಪ್ರತೀಕಾರವಾಗಿ ಪ್ರತಿಭಟನಾಕಾರರು ಪೊಲೀಸ್ ಠಾಣೆಗೆ ದಾಳಿ ನಡೆಸಿ ಬೆಂಕಿ ಹಚ್ಚಿ, ಅದರ ಎಲ್ಲಾ ನಿವಾಸಿಗಳನ್ನು ಕೊಂದರು. ಈ ಘಟನೆಯಿಂದ ಮೂವರು ನಾಗರಿಕರು ಮತ್ತು 23 ಪೊಲೀಸರು ಸಾವನ್ನಪ್ಪಿದ್ದಾರೆ. ಈ ಘಟನೆಯ ನೇರ ಪರಿಣಾಮವಾಗಿ 1922 ರ ಫೆಬ್ರವರಿ 12 ರಂದು ರಾಷ್ಟ್ರೀಯ ಮಟ್ಟದಲ್ಲಿ ಅಸಹಕಾರ ಚಳವಳಿಯನ್ನು ರಾಷ್ಟ್ರೀಯ ಮಟ್ಟದಲ್ಲಿ ತಡೆರಹಿತ ಮಹಾತ್ಮ ಗಾಂಧಿ ನಿಲ್ಲಿಸಿದರು.

Similar questions