India Languages, asked by cssudarshan9, 8 hours ago

ಬೇಸಗೆ ನೀರಿನ ಹಾಹಾಕಾರ ವರದಿ​

Answers

Answered by vivekpujar359
0

Answer:

ಕೊರೊನಾ ಸೋಂಕನ್ನು ಎದುರಿಸಲು ರಾಜ್ಯಾಡಳಿತ ಸಮರೋಪಾದಿಯಲ್ಲಿ ಸಜ್ಜಾಗಿದೆ. ಸರಕಾರದ ಈ ಸನ್ನದ್ಧತೆಯನ್ನು ನಾವು ಶ್ಲಾಘಿಸಲೇಬೇಕು. ಆರೋಗ್ಯ ಸೇವೆ, ಗೃಹ ಸಚಿವಾಲಯ ಎಲ್ಲವೂ ಕೊರೊನಾ ಸೋಂಕಿನ ಹಿಂದೆ ಬಿದ್ದಿವೆ. ಒಟ್ಟಾರೆ ಆಡಳಿತವೇ ಕೋವಿಡ್‌ ಕೇಂದ್ರಿತವಾಗಿದೆ ಎಂದರೂ ತಪ್ಪಿಲ್ಲ. ಈ ಮಧ್ಯೆ ಇನ್ನೊಂದು ಮುಖ್ಯ ವಿಚಾರ ಹಿನ್ನೆಲೆಗೆ ಸರಿದಿದೆ - ಕುಡಿಯುವ ನೀರು.

ಹಿಂಗಾರು ಮಳೆಯಿಂದಾಗಿ ಜಲಾಶಯಗಳಲ್ಲಿ ನೀರಿನ ಸಂಗ್ರಹ ಉತ್ತಮವಾಗಿದೆ ಎಂಬ ಭರವಸೆಯಿಂದ ಸುಮ್ಮನಿದ್ದ ಸರಕಾರ ಈಗ ಕುಡಿಯುವ ನೀರಿನ ಸಮಸ್ಯೆಯನ್ನು ಜೂನ್‌ನ ಮನ್ಸೂನ್‌ ಆಗಮನದವರೆಗೆ ನಿಭಾಯಿಸಬೇಕಿದೆ. ರಾಜ್ಯದ 2,607 ಜನವಸತಿ ಪ್ರದೇಶಗಳಲ್ಲಿ ಕುಡಿವ ನೀರಿನ ಸಮಸ್ಯೆಯನ್ನು ಕಂದಾಯ ಇಲಾಖೆ ಗುರುತಿಸಿದೆ. ಆದರೆ, ಪರಿಹಾರದ ಕ್ರಮಗಳು ಚಾಲನೆ ಪಡೆದಿಲ್ಲ. ಏಪ್ರಿಲ್‌ 2ನೇ ವಾರಕ್ಕೆ ಕಾಲಿಟ್ಟರೂ ನೀರಿನ ಸಮಸ್ಯೆ ನಿಭಾಯಿಸಲು ತುರ್ತು ಕ್ರಿಯಾಯೋಜನೆ ಸಿದ್ಧವಾಗಿಲ್ಲ ಹಾಗೂ ಜಿಲ್ಲಾಡಳಿತಗಳು ಆ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಿಲ್ಲ.

ಈ ಬಾರಿ ಲಾಕ್‌ಡೌನ್‌ ಪರಿಣಾಮ ಫ್ಯಾಕ್ಟರಿಗಳು, ಕಚೇರಿಗಳು ಕಾರಾರ‍ಯಚರಿಸದೆ ಇರುವುದರಿಂದ ನೀರಿನ ಬಳಕೆ ಕಡಿಮೆಯಾಗಬಹುದು ಎಂದು ತರ್ಕಿಸಲಾಗಿದ್ದರೂ, ಎಲ್ಲರೂ ಮನೆಗಳಲ್ಲಿ ಇರುವುದರಿಂದ ಹಾಗೂ ಕೊರೊನಾ ಸೋಂಕನ್ನು ತಡೆಗಟ್ಟುವ ಕ್ರಮಗಳಲ್ಲಿ ಆಗಾಗ ಕೈ ತೊಳೆದುಕೊಳ್ಳುವುದು ಸಹ ಒಂದಾಗಿರುವುದರಿಂದ, ನೀರಿನ ಬಳಕೆಯಲ್ಲೇನೂ ಕಡಿಮೆಯಾಗುತ್ತದೆ ಎಂದು ನಿರೀಕ್ಷಿಸಲಾಗದು. ಕೋವಿಡ್‌ ಸೋಂಕು ಈ ಸಲದ ಹೊಸ ಬೆದರಿಕೆಯಾಗಿದ್ದರೂ, ಕರುಳುಬೇನೆ ಹಾಗು ಕಾಲರಾ ಪ್ರಕರಣಗಳು ರಾಜ್ಯದಲ್ಲಿ ಬೇಸಿಗೆ ಸಂದರ್ಭದಲ್ಲಿ ಅಲ್ಲಲ್ಲಿ ವರದಿಯಾಗುತ್ತವೆ. ಇವು ಶುದ್ಧ ಕುಡಿಯುವ ನೀರಿನ ಕೊರತೆಯಿಂದಾಗಿಯೇ ಉಂಟಾಗುವಂಥದು.

Answered by avularupeshreddy2736
0

Answer:

Please mark as brainiest

Attachments:
Similar questions