India Languages, asked by aishwaryaaishwarya50, 23 hours ago

ಚೆನ್ನಯನಿಗೆ ಶಿವನು ಗಣಪದವಿ ಯನ್ನು ನೀಡಿದಪ್ರಸಂಗ ವನು ವಿವರಿಸಿ​

Answers

Answered by Anonymous
10

Answer:

ಕರಿಕಾಲಚೋಳನು ಆತುರಾತುರನಾಗಿ ಚೆನ್ನನನ್ನು ಹುಡುಕುತ್ತ ಬಂದು. ಚೆನ್ನನನ್ನು ಕಂಡು ಅವನ ಪಾದಗಳಿಗೆ ನಮಸ್ಕರಿಸಿ ಅವನ ಪಾದ ದೂಳಿಯನ್ನು ತನ್ನ ಶಿರದಲ್ಲಿ ಧರಿಸಿದಾಗ ಚೆನ್ನನು ಎಲೆ ಚೋಳ ಭಾನುವಂಶದ ದರ್ಪಣನಂತಿರುವ ನೀನು ಮಾಡಿದುದು ಸರಿಯೇ? ನನ್ನಂತವನ ಪಾದಗಳಿಗೆ ನೀನು ನಮಿಸುವುದು ಸರಿಯಲ್ಲ ಎಂದನು. ಚೋಳನು ನಿಮ್ಮಂತಹ ಭಕ್ತರ ಪಾದದೂಳಿಗೂ ನಾನು ಸರಿಸಮನಲ್ಲ ಎಂದು ಚೆನ್ನನನ್ನು ಆನೆಯಮೇಲೆ ಕುಳ್ಳಿರಿಸಿ ಶಿವಾಲಯಕ್ಕೆ ಕರೆದೊಯ್ದು ಶಿವನದರ್ಶನಮಾಡಿಸಿದಾಗ ಚೆನ್ನನು ಶಿವನೊಡನೆ ದೇವಾ ನನ್ನ ಪಾಡಿಗೆ ನಾನು ಅಂಬಲಿಯನ್ನು ಅರ್ಪಿಸುತ್ತಾ ಇದ್ದೆ ಚೋಳನನ್ನು ಕಳುಹಿಸಿ ನನ್ನನ್ನು ಹಿಡಿದು ತರಿಸಿದುದು ಏಕೆ? ನಾನು ಮಾಡಿದ ಅಪರಾಧವಾದರೂ ಏನು? ನಿನ್ನೊಳು ಪದವಿ ಅಧಿಕಾರಗಳನ್ನು ಬೇಡಿದ್ದೇನೆಯೇ ಎಂದೆಲ್ಲ ಕೇಳುತ್ತಾನೆ. ಶಿವನು ಅವನನ್ನು ಸಮಾಧಾನ ಪಡಿಸಿ ಪುಷ್ಪಕವಿಮಾನದಲ್ಲಿ ಕೈಲಾಸಕ್ಕೆ ಒಯ್ದು ಗಣಪದವಿಯನ್ನು ನೀಡುತ್ತಾನೆ.

\color{orange} \underline {hope \: \: \: it \: \: \: helps}

Similar questions