India Languages, asked by Tony9054, 8 months ago

Essay about Chandrayaan in Kannada with 1000 words

Answers

Answered by ChandanaGalgali
1

Answer:

First write it in English or whichever language you are comfortable with then translate it to kannada.

Hope this helps you.

Answered by gnvarshita
0

Explanation:

ಸಂಪೂರ್ಣ ದೇಶೀಯ ತಂತ್ರಜ್ಞಾನ ಅಳವಡಿಸಿ ನಿರ್ಮಿಸಿರುವ ಚಾಂದ್ರ ಪರಿಶೋಧನಾ ಅಭಿಯಾನ. ೨೨ ಜುಲೈ ೨೦೧೯ ರ ಅಪರಾಹ್ನ ೦೨ ಗಂಟೆ ೪೩ (2ಗಂ.43 ನಿ.ಕ್ಕೆ)ನಿಮಿಷ ಭಾರತೀಯ ಕಾಲಮಾನಕ್ಕೆ ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಜಿಯೋಸಿಂಕ್ರೋನಸ್ ಸ್ಯಾಟಲೈಟ್ ಲಾಂಚ್ ವೆಹಿಕಲ್ ಮಾರ್ಕ್ 3 (ಜಿ ಎಸ್ ಎಲ್ ವಿ ಎಂಕೆ 3-ಎಂ1 ) ರಾಕೆಟ್ ಮೂಲಕ ಯಶಸ್ವಿಯಾಗಿ ಉಡಾವಣೆ ಮಾಡಲಾಯಿತು.[೨]

ಚಂದ್ರಯಾನ-2

[೧]

Operator

ಭಾರತೀಯ ಬಾಹ್ಯಾಕಾಶ ಸಂಶೋಧನೆ ಸಂಸ್ಥೆ

Mission type

ಕಕ್ಷೆಗಾಮಿ, ಭೂಸ್ಪರ್ಶಕ and one ರೋವರ್

Launch date

ಜುಲೈ ೨೨, ೨೦೧೯, ೧೪:೪೩ IST (೦೯:೧೩ UTC) [೨]

Launch vehicle

ಜಿ.ಎಸ್.ಎಲ್.ವಿ

Mission duration

One year (orbiter and rover)

Satellite of

Moon

Homepage

ISRO

Mass

೨,೬೫೦ Kg (orbiter, lander and rover)

ಇಸ್ರೋದ ಮಹತ್ವಾಕಾಂಕ್ಷೆಯ ಯೋಜನೆಯ ಭಾಗವಾಗಿ ಒಂದು ಚಾಂದ್ರ ಕಕ್ಷೆಗಾಮಿ, ರೋವರ್ ಹಾಗು ಒಂದು ಭೂಸ್ಪರ್ಶಕ ಒಳಗೊಂಡಿರುವ ಇದು ಸೆಪ್ಟೆಂಬರ್‌ ವೇಳೆಗೆ ಚಂದ್ರನ ದಕ್ಷಿಣ ದ್ರುವಕ್ಕೆ ಇಳಿಯುವ ಯೋಜನೆ ಇದೆ. [೫] ಚಂದ್ರನ ದಕ್ಷಿಣ ಧ್ರುವ ಪ್ರದೇಶಕ್ಕೆ ಭೂಸ್ಪರ್ಶಕವನ್ನು ಇಳಿಸುವ ಮೊಟ್ಟ ಮೊದಲ ಯೋಜನೆ ಇದಾಗಿದೆ. ಇದಕ್ಕೆ ತಗಲುವ ವೆಚ್ಚ ಸುಮಾರು ₹೪೨೫ crore (US$೯೦ million)ರಷ್ಟೆಂದು ಅಂದಾಜಿಸಲಾಗಿದೆ.[೬] ಇಸ್ರೋ ಪ್ರಕಾರ, ಈ ಅಭಿಯಾನವು ವಿವಿಧ ಹೊಸ ತಂತ್ರಜ್ಞಾನಗಳನ್ನು ಪರೀಕ್ಷಿಸಿ ಬಳಕೆಮಾಡುವುದರ ಜೊತೆಗೆ 'ಹೊಸ' ಪ್ರಯೋಗಗಳನ್ನು ನಡೆಸುತ್ತದೆ.[೭][೮] ಗಾಲಿಗಳಿರುವ ರೋವರ್ ಚಂದ್ರನ ಮೇಲ್ಮೈ ತಲುಪಿ, ಆ ಸ್ಥಳದ ರಾಸಾಯನಿಕ ವಿಶ್ಲೇಷಣೆ ನಡೆಸಲು ಮಣ್ಣು ಅಥವಾ ಶಿಲೆಯ ಮಾದರಿಯನ್ನು ಸಂಗ್ರಹಿಸುತ್ತದೆ. ಅಲ್ಲಿನ ಅಗತ್ಯ ಅಂಕಿಅಂಶದ ದತ್ತಾಂಶವನ್ನು ಭೂಮಿಗೆ ಚಂದ್ರಯಾನ-೨ ಕಕ್ಷೆಗಾಮಿಯ ಮೂಲಕ ತಲುಪಿಸಲಾಗುತ್ತದೆ.[೯] ಚಂದ್ರಯಾನ-1 ಅಭಿಯಾನದ ಯಶಸ್ಸಿಗೆ ಕಾರಣರಾದ ಮೈಲ್ಸ್ವಾಮಿ ಅಣ್ಣಾದೊರೈ ನೇತೃತ್ವದ ತಂಡವು ಚಂದ್ರಯಾನ-೨ ಅಭಿಯಾನದಲ್ಲಿ ಕಾರ್ಯ ನಿರ್ವಹಿಸುತ್ತಿದೆ.

ಪರಿವಿಡಿ

ಇತಿಹಾಸ ಸಂಪಾದಿಸಿ

ಅಭಿಯಾನಕ್ಕೆ, ಭಾರತ ಸರ್ಕಾರವು ೧೮ ಸೆಪ್ಟೆಂಬರ್ ೨೦೦೮ರಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ರ ಅಧ್ಯಕ್ಷತೆಯಲ್ಲಿ ನಡೆದ ಯೂನಿಯನ್ ಕ್ಯಾಬಿನೆಟ್(ಕೇಂದ್ರ ಸಚಿವ ಸಂಪುಟ ಸಭೆ) ಸಭೆಯಲ್ಲಿ ಅನುಮೋದನೆ ನೀಡಲಾಯಿತು.[೧೦] ನವೆಂಬರ್ ೧೨, ೨೦೦೭ರಲ್ಲಿ, ರಷ್ಯನ್ ಫೆಡರಲ್ ಸ್ಪೇಸ್ ಏಜೆನ್ಸಿ(ರೋಸ್ಕೊಸ್ಮೊಸ್) ಹಾಗು ISROನ ಪ್ರತಿನಿಧಿಗಳು, ಎರಡೂ ಏಜೆನ್ಸಿಗಳೂ ಚಂದ್ರಯಾನ-೨ ಯೋಜನೆಯಲ್ಲಿ ಜಂಟಿಯಾಗಿ ಕಾರ್ಯನಿರ್ವಹಿಸಲು ಒಪ್ಪಂದಕ್ಕೆ ಸಹಿ ಹಾಕಿದವು.[೧೧] ಕಕ್ಷೆಗಾಮಿ ಹಾಗು ರೋವರ್ ನ ತಯಾರಿಕೆಗೆ ISRO ಪ್ರಮುಖ ಜವಾಬ್ದಾರಿ ವಹಿಸಿಕೊಂಡರೆ, ರೋಸ್ಕೊಸ್ಮೊಸ್ ಗಗನನೌಕೆ ತಯಾರಿಸುವ ಜವಾಬ್ದಾರಿಯನ್ನು ವಹಿಸಿಕೊಂಡಿತು. ಬಾಹ್ಯಾಕಾಶ ನೌಕೆಯ ವಿನ್ಯಾಸವು ಆಗಸ್ಟ್ ೨೦೦೯ರ ಹೊತ್ತಿಗೆ ಪೂರ್ಣಗೊಂಡಿತು, ಜೊತೆಗೆ ಎರಡೂ ರಾಷ್ಟ್ರಗಳ ವಿಜ್ಞಾನಿಗಳು ಇದರ ಬಗ್ಗೆ ಜಂಟಿಯಾಗಿ ವಿಧ್ಯುಕ್ತ ಪರಿಶೀಲನೆ ನಡೆಸಿದರು.[೧೨][೧೩][೧೪] ಲ್ಯಾಡರ್ ತಯಾರಿಕೆಯಲ್ಲಿ ರಷ್ಯಾದಿಂದ ವಿಳಂಬಗೂಂಡ ಕಾರಣ ಉಡಾವಣೆಯನ್ನು ೩೦೧೬ಕ್ಕೆ ಮುಂದೊಡಲಾಯಿತು. ಆದರೆ ರೋಸ್ಕೊಸ್ಮೊಸ್ ನ ಫೂಬೊಸ್-ಗ್ರಂಟ್ ಮಂಗಳ ಗ್ರಹದ ಉಡಾವಣೆ ಗುರಿಯು ವಿಫಲಗೊಂಡ ಕಾರಣ ರಷ್ಯಾ ಈ ಉಡಾವಣೆಯಿಂದ ಹೊರ ಬಂದಿತು. ಫೂಬೊಸ್-ಗ್ರಂಟ್ ಅಭಿಯಾನದ ಕೆಲವು ತಾಂತ್ರಿಕ ಅಂಶಗಳು ಚಂದ್ರಯಾನ-೨ ರಲ್ಲಿಯು ಬಳಸಲಾಗಿತ್ತು. ೨೦೧೫ ರ ಹೊತ್ತಿಗೆ ಲ್ಯಾಂಡರ್ ಅನ್ನು ಒದಗಿಸಲು ರಷ್ಯಾ ತನ್ನ ಅಸಾಮರ್ಥ್ಯವನ್ನು ಉಲ್ಲೇಖಿಸಿದಾಗ, ಭಾರತವು ಚಂದ್ರನ ಕಾರ್ಯಾಚರಣೆಯನ್ನು ಸ್ವತಂತ್ರವಾಗಿ ಅಭಿವೃದ್ಧಿಪಡಿಸಲು ನಿರ್ಧರಿಸಿತು.[೧೫]

"

Similar questions