India Languages, asked by raniguru123, 8 months ago

Kannada gade explanation of

ಊರು ಉಪಕಾರ ಅರಿಯದು
‌‌‍‌‌ಹೆಣ ಶೃಂಗಾರ ಅರಿಯದು

Answers

Answered by 0911nidhi
9

ಹೆಣಕ್ಕೂ ಶೃಂಗರಿಸುವ ಪದ್ಧತಿ ಬಹಳ ಕಡೆ ಇದೆ . ಅದನ್ನು ಕೆಲವು ಸಂಪ್ರದಾಯಗಳಲ್ಲಿ ಸಾಂಕೇತಿಕವಾಗಿ ಮಾಡುತ್ತಾರೆ . ಇನ್ನು ಕೆಲವರಲ್ಲಿ ವಿಶೇಷವಾಗಿ ಮಾಡುತ್ತಾರೆ . ನಮ್ಮ ಸಮಾಧಾನಕ್ಕೆ , ಆದ್ಯಂತ ನಡೆದುಕೊಂಡು ಬಂದ ನಮ್ಮ ನಂಬಿಕೆಗೆ ಈ ರೀತಿ ಹೆಣವನ್ನು ಶೃಂಗರಿಸುತ್ತೇವೆ. ಆದರೆ ಆ ಶೃಂಗಾರದ ವೈಭವವನ್ನು ಹೆಣ ಅರಿಯುತ್ತದೆಯೇ ?. ಇಲ್ಲ.

ನಾವು ಜನರಿಗೆ ಮಾಡುವ ಉಪಕಾರವೂ ಹಾಗೆಯೇ. ನಮ್ಮಿಂದ ಪ್ರಯೋಜನವನ್ನು ತೆಗೆದುಕೊಳ್ಳುವವರೆಗೆ ನಮ್ಮನ್ನು ಹೊಗಳುತ್ತಾರೆ. ತಮ್ಮ ತೆವಲು ತೀರಿದ ನಂತರ ನಮ್ಮನ್ನು ಮರೆತೇಬಿಡುತ್ತಾರೆ. ಹಾಗಂತ ಇದಕ್ಕೆ ಅಪವಾದ ಇಲ್ಲವೆಂದಲ್ಲ.

ಇದರ ಅರಿವಿದ್ದೂ ನಾವೇಕೆ ಜನರಿಗೆ, ಊರಿಗೆ, ನಮ್ಮನ್ನು ಆಶ್ರಯಿಸಿ ಬರುವವರಿಗೆ ನಮ್ಮ ಕೈಲಾದಷ್ಟು ಸಹಾಯವನ್ನು ಮಾಡಬೇಕು ?. ಮಾಡುತ್ತೇವೆ ಏಕೆ ?.

ನಾವೂ ಒಂದು ದಿನ ಪಾರ್ಶ್ವವಾತ ಹೊಡೆದು ಮೂಲೆಯಲ್ಲಿ ಕುಳಿತುಕೊಳ್ಳಬಹುದು. ಅಸಹಾಯಕರಾಗಿ ಮುದುಡಿಕೊಂಡು ಏಕಾಂಗಿಯಾಗಿ ಕುಳಿತುಕೊಂಡಿರಬಹುದು . ನಮ್ಮ ಸಂಬಂಧಿಕರು , ಸ್ನೇಹಿತರು , ನೆರೆಹೊರೆಯವರು ಎಷ್ಟು ಜನ , ಎಷ್ಟು ದಿನ ನಮ್ಮನ್ನು ಮಾತನಾಡಿಸಲು ಬರಲು ಸಾಧ್ಯ .

ನಾವು ಅಸಾಹಯಕರಾಗಿ , ಏಕಾಂಗಿಯಾಗಿ ಸುಮ್ಮನೆ ಮೂಲೆಯಲ್ಲಿ ಕುಳಿತುಕೊಂಡಿರುವಾಗ ನಮಗೆ ಯೋಚಿಸಲು, ನಮ್ಮ ಮನಸ್ಸಿನ ಬೇಜಾರು ಕಳೆದುಕೊಳ್ಳಲು ಒಂದಿಷ್ಟು ಯಾವುದಾದದೂ ಒಳ್ಳೆಯ ವಿಷಯಗಳು ಬೇಕು. ನಮ್ಮ ಬದುಕು ಇಲ್ಲಿಯವರೆಗೆ ಸಾರ್ಥಕ ದಾರಿಯಲ್ಲಿ ಬಂದಿದೆಯೇ , ಇಲ್ಲವೇ ವ್ಯರ್ಥವಾಗಿ ಸಾಗಿ ಬಂದಿದೆಯೇ ಎಂದು ಮಂಥನ ಮಾಡಿಕೊಳ್ಳಬೇಕೆಂದು ಮನಸ್ಸು ಹವಣಿಸುತ್ತದೆ.

ಆಗ ಸಾಗಿಬಂದ ನಮ್ಮ ಜೀವನದ ದಾರಿಯಲ್ಲಿಆಗಾಗ್ಯೆ ನಾವು ಮಾಡಿದಂಥಹ ಪರೋಪಕಾರಗಳು , ಸಮಾಜಕ್ಕಾಗಿ ಮಾಡಿದಂಥಹ ಒಳ್ಳೆಯ ಕೆಲಸಗಳು ಮೂಲೆಯಲ್ಲಿ ಕುಳಿತು ಜಡ್ಡುಗಟ್ಟಲು ಪ್ರಾರಂಭವಾದ ನಮ್ಮ ಮನಸ್ಸಿಗೆ ಚೇತನ ಮತ್ತು ಸಮಾಧಾನವನ್ನು ಕೊಡುತ್ತವೆ . ಅಷ್ಟಕ್ಕಾಗಿ ನಾವು ಊರಿಗೆ ಉಪಕಾರವನ್ನು ನಮ್ಮ ಜೀವನದಲ್ಲಿ ಮಾಡಿರಬೇಕು

ಹೆಣ ಶೃಂಗಾರವನ್ನು ಅರಿಯದಿದ್ದರೂ ನಮ್ಮ ನಂಬಿಕೆಯ ಸಮಾಧಾನಕ್ಕಾಗಿ ಅದನ್ನು ಮಾಡುತ್ತೇವೆ. ಹಾಗೆಯೇ ಊರು ಉಪಕಾರವನ್ನು ಅರಿಯದಿದ್ದರೂ ನಮ್ಮ ಮಾನಸಿಕ ಸಮಾಧಾನಕ್ಕಾಗಿ ಅದನ್ನು ನಾವು ಮಾಡಬೇಕು. ಅಷ್ಟೇ !.

hope it helps you.....

Answered by anshuman916sl
1

Correct Answer:

ಊರು ಉಪಕಾರ ಅರಿಯದು;ಹೆಣ ಸಿಂಗಾರ ಅರಿಯದು:

ಒಂದೊಂದು ಗಾದೆಯ ಹಿಂದೆ ಅನುಭವದ ದೃಷ್ಟಾಂತವಿರುತ್ತದೆ. ಊರು ಉಪಕಾರ ಅರಿಯದು; ಹೆಣ ಸಿಂಗಾರ ಅರಿಯದು ಎಂಬ ಗಾದೆ ಮಾತಿನಲ್ಲಿ ಅಡಗಿದ ಅರ್ಥ ಮಾರ್ಮಿಕವಾದುದು. ಊರು ಅಂದರೆ ಜನಸಮೂಹ. ಒಬ್ಬ ಅಪಾರ ಉದಾರ, ದಾನ, ಧರ್ಮ ಈ ಸ್ವಭಾವದ ವ್ಯಕ್ತಿಯು ನಿಸ್ವಾರ್ಥತೆಯಿಂದ ಪರೋಪಕಾರವನ್ನು ಮಾಡುತ್ತಿದ್ದ. ಅವನು ಒಬ್ಬಿಬ್ಬ ವ್ಯಕ್ತಿಗೆ ಸಹಾಯ ಮಾಡುತ್ತಿರಲಿಲ್ಲ, ಇಡಿ ಜನಸಮೂಹಕ್ಕೆ ಉಪಕಾರ ಮಾಡುತ್ತಿದ್ದ. ಉಪಕಾರಕ್ಕೆ ಪ್ರತಿಯಾಗಿ ಅವನೇನೂ ಫಲ ಆಗಲಿ ಸಹಾಯ ಹಸ್ತವನ್ನಾಗಲಿ ಬಯಸಿದವನಲ್ಲ. ಕೊನೆ ಕೊನೆಯಲ್ಲಿ ಎಲ್ಲರಂತೆ ಅವನೂ ಸಹ ವಯೋಮಾನದಿಂದ ಮುದುಕನಾಗಿ ಅಸಹಾಯಕ ವ್ಯಕ್ತಿಯಾಗಿ ಬಿಟ್ಟ. ಉಪಕಾರ ಮಾಡುವ ಶಕ್ತಿ, ಯುಕ್ತಿಯಾಗಲಿ ಅವನಿಗಿರಲಿಲ್ಲ ಎಲ್ಲವು ನಶಿಸಿದ ಜೀವ ಅಶಕ್ತನಾಗಿದ್ದ. ಅಸಹಾಯಕನೊ, ಅಶಕ್ತನೂ ಆಗಿರುವ ಆತ ಇನ್ನೊಬ್ಬರ ಸಹಾಯ, ನೆರವು, ಬೆಂಬಲ ಬಯಸಿದಾಗ ಯಾರು ಅವನತ್ತ ತಿರುಗಿ ನೋಡದಾದರು!! ಊರು ಅವನನ್ನು ಮರೆತಿದೆ. ಅವನ ಕಾಲದಲ್ಲಿ ಉಪಕೃತರಾದವರು ತೀರಿಕೊಂಡಿದ್ದಾರೆ. ಬದುಕಿ ಉಳಿದವರಿಗೆ ಅವನ ನೆನಪು ಮಾಸಿದೆ. ಇದು, ಸಾಮೂಹಿಕವಾಗಿ ಉಪಕಾರ ಮಾಡಿದವನಿಗೆ ಸಿಕ್ಕ ಪುರಸ್ಕಾರ ಅಥವಾ ಫಲ!

ಈ ಮೇಲಿನ ಅನುಭವಕ್ಕೆ ಉಪಮೆಯವಾಗಿ ಬಂದಿರುವ ಮಾತು ಹೆಣ ಸಿಂಗಾರವರಿಯದು ಎಂಬುದು. ನಿರ್ಜೀವ ದೇಹವನ್ನು ಎಷ್ಟೇ ಅಲಂಕರಿಸಿದರೂ ಸತ್ತ ವ್ಯಕ್ತಿಗೆ ಧನ್ಯತಾಭಾವ ಹುಟ್ಟಲಾರದು!! ಹೆಣಕ್ಕೆ ಸಿಂಗಾರ ವ್ಯರ್ಥ ಅದೇ ರೀತಿ ಊರಿಗೆ ಉಪಕರಿಸಲು ಹೊರಟರೆ ವ್ಯರ್ಥ ಪರಿಣಾಮ ಎಂಬುದು ಲೋಕಾನುಭವ. ಈ ಗಾದೆ ಮಾತಿನ ನೀತಿಯೆಂದರೆ, ಉಪಕಾರ ಮಾಡುವಾಗ ಯೋಗ್ಯರಿಗೆ ಮಾಡಬೇಕು, ಉಪಕೃತಿಯ ಪ್ರಜ್ಞೆ, ನೆನಪು, ಉಳ್ಳವರಿಗೆ ಮಾಡಬೇಕು. ಈ ಎಚ್ಚರ ಇರದಿದ್ದರೆ ಉಪಕಾರ ಬುದ್ಧಿಗೆ ಬೆಲೆಯಿಲ್ಲ ಅಥವಾ ನೆಲೆಯಿಲ್ಲ. ಕಿರಿಯರಿಗೆ ಹಿರಿಯರು ಸೂಚಾರ್ಥ್ಯದಲ್ಲಿ ನೀಡಿದ ಶಿಕ್ಷಣವೆಂದರೆ ಗಾದೆಗಳ ಪ್ರಯೋಗ.

#SPJ3

Similar questions