India Languages, asked by Aliya23654, 2 months ago

kumbaranige varusha donnege nimisha gaadhe(proverb)
explanation in kannada​

Answers

Answered by Anonymous
72

‘ಕುಂಬಾರನಿಗೆ ವರುಷ, ದೊಣ್ಣೆಗೆ ನಿಮಿಷ’

ಗಾದೆಯು ಜನಪದ ಸಾಹಿತ್ಯದ ಪ್ರಮುಖ ಪ್ರಕಾರಗಳಲ್ಲಿ ಒಂದಾಗಿದ್ದು, ಜನಸಾಮಾನ್ಯರ ಜೀವನ ಹಾಗೂ ಭಾಷೆಯಲ್ಲಿ ಹಾಸು ಹೊಕ್ಕಾಗಿ ವ್ಯಾಪಕವಾಗಿದೆ. ಆಡುಮಾತಿನ ಜೀವಸತ್ವಗಳೇ ಆಗಿವೆ ಎಂದರೆ ತಪ್ಪಾಗಲಾರದು. ಊಟಕ್ಕೆ ಉಪ್ಪಿನಕಾಯಿಯಂತೆ ಮಾತಿಗೆ ಗಾದೆಗಳು ವ್ಯಂಜನಶಕ್ತಿಯನ್ನು ಒದಗಿಸುತ್ತವೆ. ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬಂತೆ ಗಾದೆಗಳು ಗಾತ್ರದಲ್ಲಿ ಬಿಂದುವಿನಂತಿದ್ದರೂ ಅರ್ಥದಲ್ಲಿ ಸಿಂಧುವೇ ಎನಿಸಿವೆ.

‘ಕುಂಬಾರನಿಗೆ ವರುಷ, ದೊಣ್ಣೆಗೆ ಒಂದು ನಿಮಿಷ’ ಎಂಬ ಗಾದೆ ದಿನ ನಿತ್ಯದ ಮಾತಿನಲ್ಲಿ ಹೆಚ್ಚು ಬಳಕೆಯಲ್ಲಿದೆ. ಯಾವುದೇ ವಸ್ತುವನ್ನು ತಯಾರಿಸಲು ಸಿದ್ಧತೆ ಬೇಕು. ಪರಿಶ್ರಮ ಬೇಕು, ಕಾಲಾವಕಾಶವೂ ಬೇಕು. ಈ ಗಾದೆಯ ಹಿಂದೆ ಸಂಭವಿಸಿರಬಹುದಾದ ಘಟನೆಯನ್ನು ನಾವು ಸುಲಭವಾಗಿ ಊಹಿಸ ಬಹುದಾಗಿದೆ. ಕುಂಬಾರನೊಬ್ಬ ಹಲವಾರುದಿನಗಳ ಸಿದ್ಧತೆಗಳನ್ನು ಮಾಡಿಕೊಂಡು, ಬೆವರು ಸುರಿಸಿ ಮಡಕೆಗಳನ್ನು ತಯಾರಿಸುತ್ತಾನೆ. ಹೀಗೆ ಪರಿಶ್ರಮದಿಂದ ತಯಾರಿಸಿದ ಮಡಕೆಯನ್ನು ಸುಲಭವಾಗಿ ಒಡೆದು ಹಾಕಿ ಬಿಡುಹುದು. ದೊಣ್ಣೆಯನ್ನು ಬೀಸಿ ನಿಮಿಷ ಮಾತ್ರದಲ್ಲಿ ನಾಶಮಾಡಿದ ಅನಾಹುತ ಘಟನೆಯನ್ನು ಕಣ್ಣಾರೆಕಂಡ ಚಿಂತಕನೊಬ್ಬನು ‘ಕುಂಬಾರನಿಗೆ ವರುಷ, ದೊಣ್ಣೆಗೆ ನಿಮಿಷ’ ಎಂದು ಉದ್ಗರಿಸಿರಬೇಕು. ಸ್ವಾನುಭವದಿಂದ ಪ್ರಜ್ಞಾವಂತ ಜಾಣನೊಬ್ಬನು ಸಾರ್ವಜನಿಕ ಸತ್ಯದ ಈ ನಿಪುಣನುಡಿಯನ್ನು ಸೆರೆಹಿಡಿಯುವ ಸಾಹಸ ಮಾಡಿದ್ದಾನೆಂದರೆ ತಪ್ಪಾಗಲಾರದು. ಮನಮುಟ್ಟುವ, ಮನಮಿಡಿಯುವ ವಾಸ್ತವಿಕಕ್ಕೆ ಸನಿಹವಾದ ಈ ನುಡಿ ಸೃಷ್ಟಿಯಾದ ಕ್ಷಣದಿಂದ ಇಂದಿನವರೆಗೂ ಜನರ ಬಾಯಲ್ಲಿ ಅವಿರತವಾಗಿ ಹರಿದು ಬಂದು ಪ್ರತಿನಿತ್ಯ ಪ್ರತಿಕ್ಷಣವೂ ಸತ್ಯ ದರ್ಶನವನ್ನು ಮಾಡಿಸುತ್ತಿದೆ.

ಒಳ್ಳೆಯದನ್ನು ಮಾಡುವುದು ಕಷ್ಟ. ಕೆಟ್ಟದ್ದನ್ನು ಮಾಡುವುದು, ಹಾಳುಮಾಡುವುದು ಸುಲಭ. ಯಾವುದೇ ಒಂದನ್ನು ಸೃಷ್ಟಿ ಮಾಡುವುದು ಕಷ್ಟಮಾತ್ರವಲ್ಲ, ಸಾಕಷ್ಟು ಸಮಯಾವಕಾಶ ಬೇಕು. ನಾಶ ಮಾಡುವುದಕ್ಕೆ ಹೆಚ್ಚಿನ ಸಮಯ ಬೇಕಾಗುವುದಿಲ್ಲ ಎಂಬ ವಿಚಾರವನ್ನು ಈ ಗಾದೆ ಸ್ಪಷ್ಟಪಡಿಸುತ್ತದೆ.

ಚಿಕ್ಕದಾಗಿ, ಚೊಕ್ಕವಾಗಿ ಹೇಳ ಬೇಕಾದರೆ ಸೂಚ್ಯವಾಗಿ ತಿಳಿಸಬೇಕಾದುದನ್ನು ಸೂಚಿಸಲು ಇಂತಹ ರೂಪಕಗಳನ್ನು ಬಳಸುತ್ತೇವೆ. ಕುಂಬಾರಿಕೆಯ ಕ್ರಿಯಾಶಕ್ತಿ ಮತ್ತು ದೊಣ್ಣೆಯ ವಿನಾಶಕಾರಕ ರೂಪಕ ಈ ಗಾದೆಯ ಸ್ವಾರಸ್ಯವಾಗಿದೆ.

Similar questions