India Languages, asked by gunal1380, 8 months ago

"ಹೆತ್ತ ತಾಯಿ ಹೊತ್ತ ನಾಡು ಸರ್ವಗಿಂತಲು ಮಿಗಿಲು "
ಗಾದೆ ವಿವರಿಸಿ

Answers

Answered by Anonymous
13

Answer:

ಹೆತ್ತತಾಯಿ ಹೊತ್ತನಾಡು ಸ್ವರ್ಗಕ್ಕಿಂತಲೂ ಮಿಗಿಲು.

* ಗಾದೆಗಳು ವೇದಗಳಿಗೆ ಸಮ, ಗಾದೆಗಳು ಹಿರಿಯರ ಅನುಭವದ ಮಾತುಗಳಾಗಿವೆ.

* ಇದು ಒಂದು ಜನಪ್ರಿಯ ಗಾದೆ ಮಾತಾಗಿದ್ದು; ನಮಗೆ ಜನ್ಮ ನೀಡಿದ ತಾಯಿ ಮತ್ತು ನಮ್ಮ ಜನ್ಮ ಭೂಮಿ ಶ್ರೇಷ್ಠ ಎಂಬುದನ್ನು ತಿಳಿಸುತ್ತದೆ.

‘ಜನನಿ ಜನ್ಮ ಭೂಮಿಶ್ಚ ಸ್ವರ್ಗಾದಪಿ ಗರೀಯಸೀ’ ಇದು ವಾಲ್ಮೀಕಿ ರಾಮಾಯಣದಲ್ಲಿ ಬರುವ ಒಂದು ಮಾತು. ಇದರ ಅರ್ಥವೇ ’ಹೆತ್ತ ತಾಯಿ ಹೊತ್ತ ನಾಡು ಸ್ವರ್ಗಕ್ಕಿಂತ ಮಿಗಿಲು’ ಎಂಬುದಾಗಿದೆ. ಇದರಲ್ಲಿ ತಾಯಿ ಮತ್ತು ನಾಡಿನ ಮಹತ್ವ ಅಡಗಿದೆ. ನಮ್ಮನ್ನು ಹೆತ್ತು ಹೊತು ಸಾಕಿ ಸಲುಹಿದ ತಾಯಿಯ ಮಡಿಲು ಸ್ವರ್ಗಕ್ಕಿಂತಲೂ ಮಿಗಿಲಾದ ಸುಖವನ್ನು ನೀಡುತ್ತದೆ ಎನ್ನುವುದು ಅನುಭವಿಗಳ ಹೇಳಿಕೆ. ಮಕ್ಕಳ ಪಾಲನೆಗಾಗಿ ತಾಯಿ ತನ್ನ ಸುಖವನ್ನೆಲ್ಲ ಮರೆತು ಆಹಾರ ನಿದ್ರೆಗಳನ್ನು ತೊರೆದು ಮಗುವಿನ ಲಾಲನೆ ಪೋಷಣೆಗಳಲ್ಲಿಯೇ ಸುಖವನ್ನು ಕಾಣುತ್ತಾಳೆ. ’ಯಾರೇ ಆದಾರೂ ಹೆತ್ತ ತಾಯಂತೆ ಆದಾರೆ? ಸಾವಿರ ಸೌದೆ ಒಲೆಯಲ್ಲಿ ಉರಿದರು ದೀವಿಗೆಯಂತ ಬೆಳಕುಂಟೆ?’ ಎಂದು ಜನಪದರು ತಾಯಿಯ ಮಹತ್ವವನ್ನು ಸಾರಿದ್ದಾರೆ.

ಅಂತೆಯೇ ಹೊತ್ತನಾಡು ನಮ್ಮನ್ನು ಜೀವನ ಪೂರ್ತಿ ತನ್ನ ಮಡಿಲಲ್ಲಿಟ್ಟು ಪೋಷಿಸುತ್ತದೆ. ನಮ್ಮ ಜೀವನಕ್ಕೆ ಅಗತ್ಯವಾದಂತಹ ಅನ್ನ, ನೀರು, ಬಟ್ಟೆ, ವಸತಿ, ಹಾಗೂ ಇನ್ನಿತರ ಎಲ್ಲಾ ಅವಶ್ಯಕತೆಗಳನ್ನು ಪೂರೈಸುವಂತಹ ಜನ್ಮ ಭೂಮಿಯನ್ನು ತಾಯಿಗೆ ಹೋಲಿಸಿರುವುದು ಶ್ರೇಷ್ಠವಾಗಿದೆ. ತಾಯಿಯಂತೆಯೇ ನಾವು ಹುಟ್ಟಿದ ನಾಡು ಕೂಡ ಆ ನೆಲದಲ್ಲಿ ಆಡುತ್ತೇವೆ, ಅಗೆಯುತ್ತೇವೆ. ಬೆಳೆಯನ್ನು ಬೆಳೆಯುತ್ತೇವೆ, ಬೆಳೆದುದನ್ನು ತಿಂದು ಬದುಕುತ್ತೇವೆ. ತಾಯಿಯಂತೆ ನಾಡು ನಮ್ಮನ್ನು ಪೋಷಿಸುತ್ತದೆ. ಅದ್ದರಿಂದ ಜನ್ಮಭೂಮಿಯನ್ನು ಮರೆತವರು ತಾಯಿಯನ್ನು ಮರೆತಂತೆಯೇ ಸರಿ. ಆದುದರಿಂದ ಹೆತ್ತತಾಯಿ ಹೊತ್ತನಾಡಿನ ಋಣವನ್ನು ಮರೆಯದೇ ಅವರ ಹಿರಿಮೆಯನ್ನು ಎತ್ತಿಹಿಡಿಯಬೇಕಾದದ್ದು ಪ್ರತಿಯೊಬ್ಬನ ಆದ್ಯಕರ್ತವ್ಯವಾಗಿದೆ.

Be Brainly!

Answered by gowthaamps
1

Answer:

ಮಾತೃಭೂಮಿ ನೀವು ಹುಟ್ಟಿದ ಸ್ಥಳವನ್ನು ಸೂಚಿಸುತ್ತದೆ. ಬೇರೆ ಯಾವುದೇ ದೇಶಕ್ಕೆ ಹೋಲಿಸಿದರೆ, ನಿಮ್ಮ ತಾಯ್ನಾಡು ನಿಮ್ಮನ್ನು ಹೆಚ್ಚು ಸ್ವಾಗತಿಸುತ್ತದೆ.

Explanation:

  • ನಮ್ಮ ಮಾತೃಭೂಮಿಯ ಶ್ರೀಮಂತ ಪರಂಪರೆಯ ಬಗ್ಗೆ ನಾವು ಹೆಮ್ಮೆ ಪಡಬೇಕು. ಇದು ವ್ಯಾಪಕ ಶ್ರೇಣಿಯ ಸಂಸ್ಕೃತಿಗಳು, ಸಂಪ್ರದಾಯಗಳು ಮತ್ತು ನಂಬಿಕೆಗಳನ್ನು ಸಹ ಆಯೋಜಿಸುತ್ತದೆ. ಕೆಲವು ಇತರ ರಾಷ್ಟ್ರಗಳು ಅಂತಹ ಸಾಧನೆಯ ಬಗ್ಗೆ ಹೆಮ್ಮೆಪಡಬಹುದು.
  • ಮಾತೃಭೂಮಿ ನಾವು ಯಾರೆಂಬುದನ್ನು ರೂಪಿಸುವ ಸ್ಥಳವಾಗಿದೆ.
  • ನಮಗೆ ಜೀವ ಕೊಡುವವಳು, ಹಾಲು ಕೊಡುವವಳು, ಅದ್ಭುತವಾದ ಜಗತ್ತಿಗೆ ನಮ್ಮ ಕಣ್ಣು ತೆರೆಸುವವಳು ನಮ್ಮ ತಾಯಿ.
  • ನನ್ನ ಅಮ್ಮ ನನಗೆ ಪ್ರಪಂಚದಲ್ಲಿ ಸಾಟಿಯಿಲ್ಲದ ಷರತ್ತುರಹಿತ ಪ್ರೀತಿ ತೋರಿಸಿದ್ದಾಳೆ.
  • ತಾಯಿಯ ಪ್ರೀತಿ ನಿಸ್ವಾರ್ಥ. ನಮ್ಮ ಜೊತೆಗೆ ಸುಖ ದುಃಖ ಎರಡನ್ನೂ ಅನುಭವಿಸುವವಳು ತಾಯಿ.
  • ತಾಯಿಯು ನಮಗಾಗಿ ತನ್ನ ಎಲ್ಲಾ ಸಂತೋಷವನ್ನು ಬಿಟ್ಟುಕೊಡುವವಳು ಮತ್ತು ಪ್ರತಿಯಾಗಿ ಏನನ್ನೂ ಕೇಳುವುದಿಲ್ಲ.
  • ತಮ್ಮ ಮಕ್ಕಳು ಅನಾರೋಗ್ಯದಿಂದ ಬಳಲುತ್ತಿದ್ದರೆ ಮತ್ತು ಅವರಿಗೆ ಮಲಗಲು ಅವಕಾಶ ನೀಡಿದಾಗ, ತಾಯಂದಿರು ಮಾತ್ರ ಇಡೀ ರಾತ್ರಿ ನಿದ್ರೆ ಮಾಡುವುದಿಲ್ಲ.
  • ಮಕ್ಕಳು ತಮ್ಮ ಕಾಲಿನ ಮೇಲೆ ನಿಲ್ಲಲು ಸಾಧ್ಯವಾದಾಗ, ತಾಯಂದಿರು ಅವರಿಗಾಗಿ ನಾವು ಅರ್ಥಮಾಡಿಕೊಳ್ಳಲು ಪ್ರಾರಂಭಿಸದ ಅನೇಕ ಕೆಲಸಗಳನ್ನು ಮಾಡುತ್ತಾರೆ.
  • ನಂತರ, ಪ್ರಪಂಚದಾದ್ಯಂತದ ಅನೇಕ ಮಕ್ಕಳು ತಮ್ಮ ತಾಯಂದಿರ ಸ್ಮರಣೆಯನ್ನು ಕಳೆದುಕೊಳ್ಳಲು ಪ್ರಾರಂಭಿಸುತ್ತಾರೆ. ಪರಿಣಾಮವಾಗಿ, ನಾವು ತಾಯಂದಿರನ್ನು ಗೌರವಿಸಬೇಕು ಮತ್ತು ಕಾಳಜಿ ವಹಿಸಬೇಕು.

#SPJ2

Similar questions