India Languages, asked by pshiva4321, 9 months ago

Short essay on Janna in Kannada in words

Answers

Answered by Anonymous
1

Explanation:

ಜನ್ನಾ 13 ನೇ ಶತಮಾನದ ಆರಂಭದ ಪ್ರಸಿದ್ಧ ಕನ್ನಡ ಕವಿಗಳಲ್ಲಿ ಒಬ್ಬರಾಗಿದ್ದರು, ಅವರು ಮಂತ್ರಿ ಮತ್ತು ದೇವಾಲಯಗಳನ್ನು ನಿರ್ಮಿಸುವವರ ಸಾಮರ್ಥ್ಯದಲ್ಲಿಯೂ ಸೇವೆ ಸಲ್ಲಿಸಿದರು. ಅವರು ಹೊಯ್ಸಳ ಸಾಮ್ರಾಜ್ಯದ ರಾಜ ವೀರ ಬಲ್ಲಾಲ II ರ ಆಸ್ಥಾನವನ್ನು ಅಲಂಕರಿಸಿ ಕವಿಚಕ್ರವರ್ತಿ ಎಂಬ ಬಿರುದನ್ನು ಗಳಿಸಿದರು.

Answered by AditiHegde
0

Short essay on Janna in Kannada in words

ಜನ್ನ (೧೩ ನೇ ಶತಮಾನ)

ಕಾವ್ಯನಾಮ : ಜನಾರ್ಧನದೇವ, ಜನ್ನ, ಜನ್ನಮಯ್ಯ, ಜನ್ನಯ್ಯ,  ಜನ್ನಮರಸ, ಜನ್ನಿಗ, ಜಾನಕಿ ಎಂದು ತನ್ನ ಹೆಸರನ್ನೇ ಕವಿ ಹಲವು ಬಗೆಯಾಗಿ ಹೇಳಿಕೊಂಡಿದ್ದಾನೆ.

ಮನೆತನ : ``ಸೂಕ್ತಿ ಸುಧಾರ್ಣವ'ದ ಕರ್ತೃ ಮಲ್ಲಿಕಾರ್ಜುನನು ಜನ್ನನ ಸೋದರಿಯ ಗಂಡ.  ಶಬ್ದಮಣಿ ದರ್ಪಣ'ವನ್ನು ಬರೆದ ಕೇಶಿರಾಜನು ಇವನ ಸೋದರಳಿಯ. ಇಂಥ ಅಪೂರ್ವವಾದ ವಿದ್ವದ್ವಂಶಕ್ಕೆ ಸೇರಿದ ಪುಣ್ಯಶಾಲಿ ಜನ್ನಕವಿ.

ಪ್ರಶಸ್ತಿ, ಪುರಸ್ಕಾರ, ಬಿರುದು:

ಇವನು `ನಾೞ್ಪ್ರಭು'ವೂ ಆಗಿದ್ದನಂತೆ! `ಜಿನೇಂದ್ರ ನಿಲಯ ನಿರ್ಮಾಣಧನಂ' ಎಂದು ಹೇಳಿಕೊಂಡಿರುವ ಜನ್ನನು ಶ್ರೀಮಂತನಾಗಿದ್ದನೆಂದು ತಿಳಿಯಬೇಕು.

ಇವನಿಗೆ `ಉದ್ದಂಡಕವಿ' `ಅಸಹಾಯ ಸುಕವಿ',`ಕವಿಚಕ್ರವರ್ತಿ',  `ಸಾಹಿತ್ಯ ರತ್ನಾಕರಂ' 'ಕವಿ ಭಾಳನೇತ್ರಂ' ಎಂಬ ಬಿರುದುಗಳಿವೆ.

ಸಾಹಿತ್ಯಕೃತಿಗಳು :

ಆ ಸಂಧಿಗಳಿಗೆ ಅವತಾರಗಳೆಂದೇ ಹೆಸರು. ಸನ್ನಿವೇಶಚಿತ್ರಣ, ಪಾತ್ರಪೋಷಣ, ಮನಸ್ಸಿನ ಧರ್ಮಸಂಕಟಗಳನ್ನು ಹೃದಯಂಗಮವಾಗಿ ಚಿತ್ರಿಸುವಿಕೆ, ಎಲ್ಲದರಲ್ಲಿಯೂ ಜನ್ನ ಈ ಕಾವ್ಯದಲ್ಲಿ ಬಹಳ ಯಶಸ್ವಿಯಾಗಿದ್ದಾನೆ. ಇದನ ಮಧ್ಯೆ ಧರ್ಮಜಿಜ್ಞಾಸೆ, ಭವಾವಳಿಯ ನಿರೂಪಣೆಗಳು ಬಂದಿವೆ. ಈತನ ಕಂದಪದ್ಯಗಳ ಓಟ ಬಹಳ ರಮಣೀಯವಾಗಿದೆ.

ಯಶೋಧರ ಚರಿತೆ : ಇದು ನಾಲ್ಕು ಅವತಾರಗಳನ್ನುಳ್ಳ ಚಿಕ್ಕದಾದರೂ ಚೊಕ್ಕವಾಗಿರುವ ಉತ್ಕೃಷ್ಟ ಕಾವ್ಯ. ಇದರಲ್ಲಿ ಮಾರಿದತ್ತನೆಂಬ `ಹಿಂಸಾರಭಸಮತಿ'ಯಾದ ದೊರೆಯನ್ನು ಧರ್ಮಕ್ಕೆ ತಿರುಗಿಸಿದ ಶುಭ ಕಥೆ ಬಂದಿದೆ.

ಚಂದಮಾರಿ ದೇವತೆಗೆ ಬಲಿ ಕೊಡುವ ಸಲುವಾಗಿ ಅವರನ್ನು ತಳವಾರನು ಹಿಡಿತರಲು ಅಕಸ್ಮಾತ್ ಮಾರಿದತ್ತನಿಗೆ ಅವರ ವಿಷಯದಲ್ಲಿ ಅನುಕಂಪ ಹುಟ್ಟಿ ಅವರ ಚರಿತ್ರೆಯನ್ನು ವಿಚಾರಿಸಲು ಅವರು ತಮ್ಮ ಜನ್ಮಾಂತರ ಕಥೆಯನ್ನೆಲ್ಲಾ ಹೇಳಿದರು. ಅದನ್ನು ಕೇಳಿ ಮಾರಿದತ್ತನಿಗೆ, ಆ ಚಂಡಮಾರಿದೇವತೆಗೂ ಹಿಂಸಾಕರ್ಮದಲ್ಲಿ ಅಸಹ್ಯ ಮೂಡಿತು. ಅವರಿಬ್ಬರೂ ಅಭಯರುಚಿ ಕುಮಾರನಲ್ಲಿ ಅಹಿಂಸೆಯ ದೀಕ್ಷೆ ಕೈಗೊಂಡರು. ಇದಿಷ್ಟು ಕಥೆಯನ್ನು ಅಚ್ಚುಕಟ್ಟಾಗಿ ಕಂದಪದ್ಯಗಳಲ್ಲಿ ಜನ್ನ ನಾಲ್ಕು ಚಿಕ್ಕ ಸಂಧಿಗಳಲ್ಲಿ ಹೇಳಿ ಮುಗಿಸಿದ್ದಾನೆ.

ಸಂಕಲ್ಪಹಿಂಸೆಯೊಂದರಿಂದ ಹಲವು ಹೀನಯೋನಿಗಳಲ್ಲಿ ಹುಟ್ಟಿ ಹಲವು ಕಷ್ಟಸಂಕಟಗಳನ್ನು ಅನುಭವಿಸಿದ ಚಂದ್ರಮತಿ ಯಶೋಧರರೆಂಬ ತಾಯಿ ಮಕ್ಕಳು ಕೋಳಿಗಳಾಗಿದ್ದಾಗ ಜೀನದೀಕ್ಷೆ ವಹಿಸಿದ ನಿಮಿತ್ತದಿಂದ ತಮಗೆ ಮತ್ತೆ ಮಾನುಷಜನ್ಮ ಬಂದು ಅಭಯರುಚಿ ಅಭಯಮತಿಗಳೆಂಬ ಅಣ್ಣತಂಗಿಯರಾಗಿ ಹುಟ್ಟಿದರು.

ಕ್ರಿ.ಶ. ೧೨೦೯ರಲ್ಲಿ `ಯಶೋಧರ ಚರಿತೆ'ಯನ್ನು, ಕ್ರಿ.ಶ. ೧೨೩೦ರಲ್ಲಿ `ಅನಂತನಾಥ ಪುರಾಣ'ವನ್ನೂ ರಚಿಸಿದನು.

ಈ ಕವಿಯ ಸಾಹಿತ್ಯ ಸೇವೆ ಕ್ರಿ.ಶ. ೧೧೯೧ ರಿಂದ ಕ್ರಿ.ಶ. ೧೨೩೦ರವರಗೆ ನಲವತ್ತು ವರ್ಷಗಳ ಕಾಲ ನಡೆಯಿತು.

ಜನ್ನ `ಇತ್ತಕೈಯಲ್ಲದೇ ಒಡ್ಡಿದ ಕೈಯಲ್ಲದ ಪೆಂಪು' ಎಂದು ಹೇಳಿಕೊಂಡಿರುವುದರಿಂದ ಇವನು ಶ್ರೀಮಂತನೂ ಧಾರಾಳಿಯೂ ಆಗಿದ್ದನೆಂದು ತಿಳಿಯಬಹುದು.

ಅನಂತನಾಥ ಪುರಾಣ : ಇದು ಹದಿನಾಲ್ಕನೆಯ ತೀರ್ಥಂಕರನ ಚರಿತ್ರೆ.

ಇದರಲ್ಲಿ ಹದಿನಾಲ್ಕು ಆಶ್ವಾಸನೆಗಳಿವೆ. ಇದರಲ್ಲಿ ತೀರ್ಥಕರ ಭವಾವಳಿಯನ್ನೂ ಪಂಚಕಲ್ಯಾಣಗಳನ್ನೂ ವಿಸ್ತಾರವಾಗಿ ವರ್ಣಿಸಿದ್ದಾನೆ , ಜನ್ನ.

ಕೊನೆಯ ಭಾಗದಲ್ಲಿ ವಸುಷೇಣ ಚಂಡಶಾಸನರ ಕಥೆಯನ್ನು ರಸಮಯವಾಗಿ ಹೇಳಿದ್ದಾನೆ. ಈ ಕಥೆಯಿಂದ ಈ ತೀರ್ಥಂಕರ ಪುರಾಣಕ್ಕೆ ಒಂದು ಹೆಚ್ಚಿನ ಮೆರುಗು ಬಂದಿದೆಯೆಂದು ಹೇಳಬಹುದು. ಜನ್ನನ ಲೋಕಾನುಭವ, ಮನುಷ್ಯ ಸ್ವಭಾವ ಪರಿಜ್ಞಾನ, ಇವು `ಅನಂತನಾಥ ಪುರಾಣ'ದ ಹಲವು ಪಾತ್ರಗಳ ಚಿತ್ರದಲ್ಲಿ ಚೆನ್ನಾಗಿ ಪ್ರಕಾಶಕ್ಕೆ ಬಂದಿದೆ.

ಜನ್ನ ತುಂಬುಜೀವನವನ್ನು ಜೀವಿಸಿ ಧರ್ಮಾಚರಣೆಯನ್ನು ಮರೆಯದೆ ಧರ್ಮದ, ನೀತಿಯ ನೆಲಗಟ್ಟನ್ನು ಮೀರದೇ ಇಹಲೋಕದ ಸುಖವನ್ನು ಪರಲೋಕ ಗತಿಯ ಆಶಯವನ್ನೂ ಸಾಧಿಸಿಕೊಳ್ಳಲು ಶ್ರಮಿಸಿದ ಶ್ರೇಷ್ಠವರ್ಗದ ಜೀವನರಸಿಕ. `ಯಶೋಧರ ಚರಿತೆ'ಯಲ್ಲಿಯೂ `ಅನಂತನಾಥ ಪುರಾಣ'ದಲ್ಲಿಯೂ ಜನ್ನನು ಪ್ರಣಯವನ್ನೂ ತದಾಭಾಸವನ್ನೂ ನೈಪುಣ್ಯದಿಂದ ನಿರೂಪಿಸಿದ್ದಾನೆ.

ಜನ್ನನು ಚನ್ನರಾಯಪಟ್ಟಣದ ತಾಮ್ರಶಾಸನವನ್ನು ಕ್ರಿ.ಶ. ೧೧೯೧ರಲ್ಲಿಯೂ ತರೀಕೆರೆಯ ಶಾಸನವನ್ನು ಕ್ರಿ.ಶ. ೧೧೯೭ರಲ್ಲಿಯೂ ಬರೆದನು.

ಇವನು ದ್ವಾರಸಮುದ್ರದ ಪಾರ್ಶ್ವಜಿನನ ಮಂದಿರದ ದ್ವಾರವನ್ನು ಮಾಡಿಸಿಕೊಟ್ಟನು. ಅನಂತನಾಥ ಸ್ವಾಮಿಗೆ ಒಂದು ಬಸದಿಯನ್ನೇ ಕಟ್ಟಿಸಿದನು.

ಇವನು ಹಿಂದಿನ ಕವಿಗಳಲ್ಲಿ ಪಂಪ, ಪೊನ್ನ, ರನ್ನ ನಾಗಚಂದ್ರ ಮೊದಲಾದವರನ್ನು ಹೊಗಳಿದ್ದಾನೆ. ಮಧುರಕವಿಯು ಇವನನ್ನು ನೇಮಿಚಂದ್ರನ ಜತೆಗೆ ಸೇರಿಸಿ `ನೇಮಿ ಜನ್ನಮರಿರ್ವರೆ ಕರ್ಣಾಟಕೃತಿಗೆ ಸೀಮಾಪುರುಷರ್' ಎಂದು ಕೊಂಡಾಡಿದ್ದಾನೆ.

Similar questions