Social Sciences, asked by shivachaubey9672, 1 year ago

Write a letter in Kannada language to panchayat about request for drainage

Answers

Answered by varmatippani50858
3

I don't know Kannada

Answered by xduigdawdga
5

ಮಾನ್ಯರೇ, ಬೆಂಗಳೂರಿನ ಹೊರವಲಯದ ಪ್ರದೇಶಗಳು ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿವೆ. ಉತ್ತರ ಬೆಂಗಳೂರಿನ ನಿವಾಸಿಯಾದ ನಾವು ಕೇಂದ್ರ ಸಚಿವ ಸದಾನಂದ ಗೌಡರು ಪ್ರತಿನಿಧಿಸುವ ಕ್ಷೇತ್ರ ವ್ಯಾಪ್ತಿಯಲ್ಲಿ ಬರುತ್ತೇವೆ. ಬೆಂಗಳೂರು ಉತ್ತರದ ಕನಕಪುರ ರಸ್ತೆಗೆ ಹೊಂದಿಕೊಂಡು ಸುಮಾರು 50 ಸಾವಿರ ಮನೆಗಳಿದ್ದು 2 ಲಕ್ಷ ಜನ ವಾಸ ಮಾಡುತ್ತಿದ್ದಾರೆ. ಹೊಸ ಮನೆ ಮತ್ತು ಬಡಾವಣೆಗಳು ನಿರ್ಮಾಣವಾಗುತ್ತಿದೆ. ಅಂತರ್ಜಲ ಮಟ್ಟ ಸಂಪೂರ್ಣ ಕುಸಿದು ಹೋಗಿದೆ. ನಮಗೆ ಇರುವ ಏಕೈಕ ನೀರಿನ ಆಶ್ರಯ ಎಂದರೆ ಅದು ಕಾವೇರಿ ನೀರು. ರಾಜ್ಯ ಸರ್ಕಾರ ಇಡೀ ಬೆಂಗಳೂರಿಗೆ ಕಾವೇರಿ ನೀರು ಪೂರೈಕೆ ಮಾಡುತ್ತಿದೆ.(ನಮ್ಮನ್ನು ಬಿಟ್ಟು) ಪೈಪ್ ಲೈನ್ ಗಳನ್ನು ಇದೇ ಕನಕಪುರ ರಸ್ತೆಯಲ್ಲಿ ತೆಗೆದುಕೊಂಡು ಹೋಗಲಾಗಿದೆ. ನಮಗೆ ಮಾತ್ರ ಕಾವೇರಿ ನೀರು ಕುಡಿಯುವುದು ಕನಸಾಗಿಯೇ ಉಳಿದಿದೆ.[ನೀರಿಗಾಗಿ ಮೂರು ಹೆಂಡಿರ ಗಂಡನಾದ ಮಾರ್ತಾಂಡ!] ಇದಕ್ಕೆಲ್ಲ ಕಾರಣ ಇಲ್ಲಿರುವ ವಾಟರ್ ಮಾಫಿಯಾ. ಒಂದು ವೇಳೆ ಪ್ರದೇಶಕ್ಕೆ ಕಾವೇರಿ ನೀರು ಪೂರೈಕೆಯಾದರೆ 'ಕೆಲವರಿಗೆ' ಬರುವ ಆದಾಯ ನಿಂತು ಹೋಗುತ್ತದೆ. ಜನಪ್ರತಿನಿಧಿಗಳಿಗೂ ನಮ್ಮ ಕೂಗು ಕೇಳುತ್ತಿಲ್ಲ. 2012 ರಲ್ಲಿ ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗ ಕುಡಿಯುವ ನೀರು ನೀಡಲು ಯೋಜನೆಯೊಂದನ್ನು ರೂಪಿಸಿತ್ತು. ಆದರೆ ಬಿಡಿಎ, ಬಿಡ್ಬ್ಲೂಎಸ್ ಎಸ್ ಬಿ, ರಾಜ್ಯ ಸರ್ಕಾರಗಳ ನಡುವಿನ ಹೊಂದಾಣಿಕೆ ಕೊರತೆ ಮತ್ತು ಸಂವಹನ ಕೊರತೆಯಿಂದ ಯಾವ ಅನುದಾನ ಬಿಡುಗಡೆಯಾಗಲಿಲ್ಲ. ಸ್ವತಃ ಕೇಂದ್ರ ಸಚಿವ ಸದಾನದಂದ ಗೌಡ ಅವರೇ ಬಿಡಿಎ ಕಮಿಷನರಿಗೆ ಮನವಿ ಮಾಡಿಕೊಂಡರೂ ಹೆಚ್ಚಿನ ಅನುದಾನ ಬಿಡುಗಡೆಯಾಗಲೇ ಇಲ್ಲ. ಜಲಮಂಡಳಿಗೆ ಬಿಡಿಎ ಬಿಡುಗಡೆ ಮಾಡಿದ್ದು ಒಂದು ಕಾಲು ಕೋಟಿ ರೂ. ಆದರೆ ಜಲಮಂಡಳಿ ಕೇಳಿದ್ದು 80 ಕೋಟಿ ರು.! ಪ್ರತಿ ತಿಂಗಳು ಕುಟುಂಬವೊಂದು 8 ರಿಂದ 10 ಸಾವಿರ ರು. ಗಳನ್ನು ಕುಡಿಯುವ ನೀರಿಗೆ ವ್ಯಯಿಸಬೇಕಾಗಿದೆ. ವಾಟರ್ ಮಾಫಿಯಾ ಭಾಗದಲ್ಲಿ ಜೋರಾಗಿಯೇ ಕೆಲಸ ಮಾಡುತ್ತಿದೆ. ಹೆಚ್ಚಿನ ಹಣ ನೀಡಿ ಕೊಳಚೆ ನೀರು ಕುಡಿಯಬೇಕಾಗಿದೆ. ಎಲ್ಲರಿಗೂ ಮನವಿ ಮಾಡಿ ಅಂತಿಮವಾಗಿ ನಿಮ್ಮ ಬಳಿ ಸಮಸ್ಯೆ ಹೇಳಿಕೊಳ್ಳುತ್ತಿದ್ದೇನೆ. ದಯಮಾಡಿ ನಮಗೆ ನೀರು ಕೊಡಿ, ಬಿಡಿಎ ಮತ್ತು ಜಲಮಂಡಳಿಗೆ ಶಿಫಾರಸು ಪತ್ರ ಕಳಿಸಿಕೊಡಿ. ನಿಮ್ಮ ಶಿಫಾರಸಿನ ನಂತರವಾದರೂ ನಮಗೆ ಕಾವೇರಿ ನೀರು ಕುಡಿಯುವ ಭಾಗ್ಯ ಸಿಗುತ್ತದೆ ಎಂದು ಅಂದುಕೊಂಡಿದ್ದೇವೆ. Sir: Outskirts of Bangalaore facing severe drinking water crisis. We are from North Bangalore Lokasabha constituency...


Similar questions